Advertisement

Politics: ಪ್ರಧಾನಿ ಅಧಿಕಾರಕ್ಕಾಗಿ ಏನಾದರೂ ಮಾಡುತ್ತಾರೆ; ಸಚಿವ ಭೋಸರಾಜು ವಾಗ್ದಾಳಿ

05:03 PM Mar 13, 2024 | Team Udayavani |

ರಾಯಚೂರು: ಸಿಎಎ ಜಾರಿ ಮಾಡುವವರು ಇಷ್ಟು ದಿನ ಮಲಗಿದ್ದರಾ?  ಪ್ರಧಾನಿ ನರೇಂದ್ರ ಮೋದಿ ಏನೆ ಮಾಡಿದರೂ ಅಧಿಕಾರಕ್ಕಾಗಿಯೇ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ವಾಗ್ದಾಳಿ ನಡೆಸಿದರು.

Advertisement

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಇಡಿ ಆದಾಯ ತೆರಿಗೆ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.  ಅಯೋಧ್ಯ ಹೆಸರಲ್ಲಿ ಮೂರು ತಿಂಗಳಿಂದಲೇ ರಾಜಕೀಯ ಮಾಡುತ್ತಿದ್ದಾರೆ. ಧರ್ಮಾಧಾರಿತವಾಗಿ ದೇಶ ಒಡೆಯುವುದೇ ಬಿಜೆಪಿ ನಿಲುವು ಎಂದು ಟೀಕಿಸಿದರು.

ಸಂಸದ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಿಸುವುದಾಗಿ ಪದೇಪದೆ ಹೇಳಿಕೆ ನೀಡುತ್ತಿದ್ದಾರೆ. ಇವರಿಗೆ ನಾಚಿಕೆ ಇದ್ದರೆ ಅನಂತಕುಮಾರ ಅವರನ್ನು ಉಚ್ಛಾಟನೆ ಮಾಡಬೆಕಿತ್ತು. ಸಂವಿಧಾನ ಬದಲಾವಣೆಯಾದರೆ ದೇಶದಲ್ಲಿ ಏನಾಗುತ್ತಿತ್ತು ಎಂಬುದನ್ನು ಸಿಎಂ ಹೇಳಿದ್ದಾರೆ ಎಂದರು.

ಕೇಂದ್ರ ಸರ್ಕಾರಕ್ಕೆ 18,428 ಕೋಟಿ ಕೇಳಿದ್ದೆವೆ. ಈವರೆಗೂ ಯಾವುದೇ ಹಣ ಬಂದಿಲ್ಲ. ಈವರೆಗೆ ಒಂದೇ ಒಂದು ದಿನ ಸಂಸದರು ಮಾತನಾಡಿಲ್ಲ. ಯಾವ ಮಂತ್ರಿಯೂ ಮಾತನಾಡಿಲ್ಲ. ಯಾವ ಎಂಪಿ ಕೂಡ ಮಾತನಾಡಿಲ್ಲ. ಜಿಎಸ್ ಟಿ ಹಣ, ಅಪ್ಪರ್ ಭದ್ರಾ ಯೋಜನೆಯ 550 ಕೋಟಿ ಬರಬೇಕು. ನೀವೆ ಕರೆದುಕೊಂಡು ಹೋಗಿ ಹಣ ಕೊಡಿಸುವಂತೆ ಕೇಳಿಕೊಂಡರು ಬಿಜೆಪಿಯವರು ಬರುತ್ತಿಲ್ಲ ಎಂದು ವಾಗ್ದಾಳಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next