Advertisement

ಕಾಂಗ್ರೆಸ್ ನ ವಿಕ್ರಮ -ಬೇತಾಳದ ಕಥೆ ಹೇಳಿದ ಸಚಿವ ಬಿ.ಶ್ರೀರಾಮುಲು

02:42 PM Feb 12, 2023 | Team Udayavani |

ಬಳ್ಳಾರಿ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ ವಿಕ್ರಮ್ ಬೇತಾಳ ಕಥೆಯಂತಾಗಿದೆ. ವಿಕ್ರಮನನ್ನು ಬೇತಾಳ ಕಾಡಿದಂತೆ ಕಾಂಗ್ರೆಸ್ ಕಾಡುತ್ತಿದೆ. ವಿಕ್ರಮ ಯಾರು? ಬೇತಾಳ ಯಾರು ಅಂತ ನಾನು ಹೇಳಲ್ಲ. ಕಾಂಗ್ರೆಸ್ ಪಾರ್ಟಿಯಲ್ಲಿ ವಿಕ್ರಮ ಬೇತಾಳದಂತೆ ಸಾಕಷ್ಟು ಜನರು ಇದ್ದಾರೆ, ಅಧಿಕಾರದ ಆಸೆಯ ಕನಸು ಕಾಂಗ್ರಸ್ ಕಾಣುತ್ತಿದ್ದಾರೆ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೆಡ್ಡಿ ವಿರುದ್ದ ಗಂಗಾವತಿಯಲ್ಲಿ ಸರ್ಧೆ ವಿಚಾರವಾಗಿ ಮಾತನಾಡಿ, ರೆಡ್ಡಿ ವಿರುದ್ದ ಗಂಗಾವತಿ ಸ್ಪರ್ಧೆ ಬಗ್ಗೆ ಪಕ್ಷ ತೀರ್ಮಾನ ಮಾಡಿದ ಮೇಲೆ ನಂತರ ನಿರ್ಧಾರ ಮಾಡುತ್ತೇನೆ ಎಂದರು.

ಇದನ್ನೂ ಓದಿ:ʼಕಾಂತಾರ-2ʼ ನಲ್ಲಿ ಊರ್ವಶಿ ರೌಟೇಲಾ ನಟನೆ? : ಸ್ಪಷ್ಟನೆ ಕೊಟ್ಟ ಹೊಂಬಾಳೆಯ ಆಪ್ತ ಮೂಲ

ಪ್ರಾದೇಶಿಕ ಪಕ್ಷದಿಂದ ಬಿಜೆಪಿಗೆ ರಾಗಿ ಕಾಳಿನಷ್ಟು ತೊಂದರೆಯಾಗುವುದಿಲ್ಲ, ಸೋಮಶೇಖರ ರೆಡ್ಡಿ ಸ್ಪರ್ಧೆ 100% ಗ್ಯಾರಂಟಿ, ಅವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಧೂಳಿ ಪಟವಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next