Advertisement

ಐದು ವರ್ಷ ರಾಜ್ಯ ಸರ್ಕಾರವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ: ಸಚಿವ ಬಿ. ನಾಗೇಂದ್ರ

12:48 PM Jul 26, 2023 | Team Udayavani |

ಬೀದರ್ : ಕಾಂಗ್ರೆಸ್‌ನ ಎಲ್ಲ 135  ಶಾಸಕರು ಒಗ್ಗಟ್ಟಾಗಿದ್ದು, ರಾಜ್ಯ ಸರ್ಕಾರವನ್ನು ಐದು ವರ್ಷ ಯಾರಿಂದಲೂ ಸಹ ಅಲೆಗಾಡಿಸಲು ಸಾಧ್ಯವಿಲ್ಲ. ಐದು ಗ್ಯಾರಂಟಿಗಳನ್ನು ಜಾರಿ ಮತ್ತು ಸರ್ಕಾರದ ಆಡಳಿತದ ವೇಗವನ್ನು ಸಹಿಸಿಕೊಳ್ಳದ ವಿರೋಧ ಪಕ್ಷಗಳು ಕುತಂತ್ರಕ್ಕೆ ಇಳಿದಿದ್ದು, ಇದ್ಯಾವುದಕ್ಕೂ ನಮ್ಮ ಶಾಸಕರು ಮಣಿಯುವುದಿಲ್ಲ ಎಂದು ಕ್ರೀಡಾ ಸಚಿವ ಬಿ. ನಾಗೇಂದ್ರ ಹೇಳಿದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಿಂಗಾಪುರದಲ್ಲಿ ಕುಳಿತು ರಾಜ್ಯ ಸರ್ಕಾರವನ್ನು ಉರುಳಿಸುವ ತಂತ್ರ ಹೆಣೆಯುತ್ತಿದ್ದಾರೆ ಎಂಬ ವದಂತಿ ಇದೆ. ಆದರೆ, ರಾಜ್ಯದಲ್ಲೇ ಉಳಿದು ಏನು ಸಹ ಮಾಡಲು ಸಾಧ್ಯವಾಗದ ಕುಮಾರಸ್ವಾಮಿ ಅವರಿಗೆ ವಿದೇಶದಲ್ಲಿ ಕುಳಿತು ಏನನ್ನು ಮಾಡುತ್ತಾರೆ ? ಮುಂದಿನ ಲೋಕಸಭೆ ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳುವ ಭಯ ಇದೆ. ಹಾಗಾಗಿ ಸರ್ಕಾರದ ಅಭಿವೃದ್ಧಿ ವೇಗವನ್ನು ಕಡಿಮೆ ಮಾಡುವ ಪ್ರಯತ್ನ ನಡೆದಿದೆ. ವಿಪಕ್ಷಗಳ ಕುತಂತ್ರಕ್ಕೆ ಡಿಸಿಎಂ ಶಿವಕುಮಾರ ಬಳಿ ಪ್ರತಿತಂತ್ರಗಳು ಸಹ ಇವೆ ಎಂದರು.

ಸಚಿವರ ವಿರುದ್ಧ ಶಾಸಕರು ದೂರು ಪತ್ರ ಬರೆದಿದ್ದಾರೆ ಎಂಬುದು ಸುಳ್ಳು. ಕೆಲ ಹಿರಿಯ ಕಾಂಗ್ರೆಸ್ ಶಾಸಕರು ಮಾತನ್ನು ವ್ಯಕ್ತಪಡಿಸಿದ್ದಾರೆ ಹೊರತು ಅದು ಅಸಮಧಾನವಲ್ಲ. ಅಸಮಾಧಾನ ಇದ್ದರೂ ಅದನ್ನು ಪಕ್ಷದ ಚೌಕಟ್ಟಿನಲ್ಲಿ ಇತ್ಯರ್ಥ ಮಾಡಿಕೊಳ್ಳುತ್ತೇವೆ. ನಾವೆಲ್ಲರೂ ಹೊಸ ಸಚಿವರಾಗಿದ್ದು, ಅನುಭವದ ಕೊರತೆ ಇರುತ್ತದೆ. ಶೇ. ೬ರಷ್ಟು ಅಧಿಕಾರಿಗಳ ವರ್ಗಾವಣೆಗೆ ಮಾತ್ರ ಅವಕಾಶ ಇದ್ದು, ಅದನ್ನು ಮೀರಲು ಬರುವುದಿಲ್‌ಲ. ಆದರೆ, ವರ್ಗಾವಣೆ ವಿಷಯದಲ್ಲಿ ಬೇಡಿಕೆ ಹೆಚ್ಚಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು.

ಇದನ್ನೂ ಓದಿ: ಬೆಳ್ತಂಗಡಿ: ಕುತ್ಲೂರು ಕಾಡಬಾಗಿಲು ಸೇತುವೆ ಕುಸಿತ: ಸಂಕಷ್ಟದಲ್ಲಿ ಅರಣ್ಯವಾಸಿಗಳು

Advertisement

Udayavani is now on Telegram. Click here to join our channel and stay updated with the latest news.

Next