Advertisement

ಅಟಲ್‌ಗೆ ಅಗೌರವ ಸಲ್ಲ : ಸಚಿವ  ಬಿ.ಸಿ.ಪಾಟೀಲ

01:28 PM Aug 16, 2021 | Team Udayavani |

ಹಾವೇರಿ: ಮಾಜಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಬಗ್ಗೆ ಯಾರೂ ಅಗೌರವದಿಂದ ಮಾತನಾಡುವುದು ಸರಿಯಲ್ಲ. ಅಂಥ ಧೀಮಂತ ವ್ಯಕ್ತಿಗಳನ್ನು ಪಕ್ಷಾತೀತವಾಗಿ ಗೌರವಿಸಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಜಪೇಯಿ ಬಗ್ಗೆ ಪ್ರಿಯಾಂಕ್‌ ಖರ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು ಸರಿಯಲ್ಲ. ವಾಜಪೇಯಿ ಅಂತಹವರನ್ನು ಯಾವುದೇ ರಾಜಕೀಯ ಪಕ್ಷ‌ ಅಂತ ನೋಡದೇ ಪಕ್ಷಾತೀತವಾಗಿ ಗೌರವಿಸಬೇಕು. ಅವರ ಬಗ್ಗೆ ಕೀಳುಮಟ್ಟದ ರಾಜಕಾರಣ ಮಾಡುವುದು, ಹೇಳಿಕೆಗಳನ್ನು ನೀಡುವುದು ಸರಿಯಲ್ಲ.

ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರಾವಧಿ ಪೂರೈಸಲ್ಲ ಎನ್ನುವ ಸಿದ್ದರಾಮಯ್ಯಗೆ ಈಗ ಬೇರೆ ಕೆಲಸವಿಲ್ಲ. ಅವರು ಭವಿಷ್ಯ ನಂಬುವವರಲ್ಲ. ಆದರೆ, ಈಗ ಭವಿಷ್ಯ ಹೇಳುವುದನ್ನು ಯಾವಾಗ ಕಲಿತರೋ ಗೊತ್ತಿಲ್ಲ. ಬೊಮ್ಮಾಯಿ ಅವಧಿ ಪೂರೈಸುತ್ತಾರೆ. ಸಿದ್ದರಾಮಯ್ಯ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಬಿಜೆಪಿ ಸರ್ಕಾರ ಅಲ್ಲಾಡಿಸಲು ಯಾರಿಂದಲೂ ಸಾಧ್ಯವಿಲ್ಲ. 2023ರಲ್ಲೂ ಬಿಜೆಪಿಯೇ ಅಧಿ ಕಾರಕ್ಕೆ ಬರಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next