Advertisement

ಫೋನ್‌ನಲ್ಲೇ ಸಚಿವ ಅಶೋಕ್‌ ಬ್ಯುಸಿ

05:19 PM Jan 12, 2021 | Team Udayavani |

ಚಿತ್ರದುರ್ಗ: ಬೆಳೆ ಹಾನಿ ವೀಕ್ಷಣೆ, ಅಧಿಕಾರಿಗಳ ಸಭೆಗೆ ಸೋಮವಾರ ಜಿಲ್ಲೆಗೆ ಆಗಮಿಸಿದ್ದ ಕಂದಾಯ ಸಚಿವ ಆರ್‌. ಅಶೋಕ್‌ ಅವರಿಗೆ ಫೋನ್‌ ಮೇಲೆ ಫೋನ್‌ ಬರುತ್ತಿದ್ದವು.

Advertisement

ಪ್ರತಿ ಸಲವೂ ಪಕ್ಕಕ್ಕೆ ಹೋಗಿ ಮಾತನಾಡಿ ಬರುತ್ತಿರುವುದು ಕಂಡು ಬಂತು. ಚಿತ್ರದುರ್ಗ ತಾಲೂಕಿನ ಕಾಸವರಹಟ್ಟಿಯಲ್ಲಿ ಕೂಡ ಯಾರೋ ಫೋನ್‌ ಮಾಡಿದಾಗ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡುವುದು ಕೇಳಿಸುತ್ತಿತ್ತು.

ಇದನ್ನೂ ಓದಿ:ಸಿಂಧನೂರು: ವಿದ್ಯಾರ್ಥಿಗಳಿಗೆ ಪ್ರಯಾಣ ವೆಚ್ಚದ ಹೊರೆ

3 ಜನರದ್ದು ಕ್ಲಿಯರ್‌ ಆಗಿದೆ. ಪವರ್‌ ಖಾತೆ ಬೇಕಂತೆ ಅವನಿಗೆ, ಇವನದ್ದು ಆದರೆ ಸಾಕು ನಮಗೆ, ಮೈಸೂರಿಗೆ ಬಂದಿದ್ದನಾಅವನು, ಪ್ರಹ್ಲಾದ್‌ ಜೋಶಿಗೂ ಫೋನ್‌ ಮಾಡಿ  ಮಾತನಾಡುತ್ತೇನೆ ಎಂಬಂತೆ ಮಾತನಾಡುತ್ತಿದ್ದರು. ಈ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ಏನು ಮಾಡೋದು, ಸಚಿವ ಸಂಪುಟ ವಿಸ್ತರಣೆ ಸಮಯ. ನಮಗೂ ಕೆಲವರು ಮಂತ್ರಿಯಾಗಬೇಕು ಅಂತಾ ಇರುತ್ತದಲ್ಲಾ ಎಂದು ಸಮಜಾಯಿಷಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next