Advertisement

ಹಾರ, ತುರಾಯಿ ಬದಲು ಪರಿಹಾರಕ್ಕೆ ಸಚಿವ ಮನವಿ

11:14 PM Aug 28, 2019 | Lakshmi GovindaRaj |

ಬೆಂಗಳೂರು: ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಲು ಖರ್ಚು ಮಾಡುವ ಬದಲು ನೆರೆ ಸಂತ್ರಸ್ತರಿಗೆ ಇಚ್ಛಾನುಸಾರ ದೇಣಿಗೆ ನೀಡಲು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್‌ ತಮ್ಮ ಕಚೇರಿಯಲ್ಲಿ ನೆರೆ ಸಂತ್ರಸ್ತರಿಗೆ ನಿಧಿ ಸಂಗ್ರಹಿಸಲು (ಬಾಕ್ಸ್‌) ಡಬ್ಬಿಯನ್ನು ಇಟ್ಟಿದ್ದಾರೆ.

Advertisement

ಬುಧವಾರ ವಿಧಾನಸೌಧದ ಮೂರನೇ ಮಹಡಿಯಲ್ಲಿ ತಮ್ಮ ನೂತನ ಕಚೇರಿ ಪ್ರವೇಶ ಮಾಡುವ ವೇಳೆ ಈ ರೀತಿಯ ವಿನೂತನ ಕಳಕಳಿ ವ್ಯಕ್ತಪಡಿಸಿದ್ದು, ಅಭಿನಂದಿಸುವ ಅಭಿಮಾನಿಗಳು ಹಾಗೂ ಹಿತೈಷಿಗಳಿಗೆ ಹಾರ ತುರಾಯಿಗಳು ಬಾಡಿಹೋಗುತ್ತವೆ. ಅದರ ಬದಲು ರಾಜ್ಯದ ಪ್ರವಾಹ ಪರಿಸ್ಥಿತಿಗೆ ಸ್ಪಂದಿಸಿ, ಸಾಧ್ಯವಾದಷ್ಟು ದೇಣಿಗೆ ನೀಡುವಂತೆ ತಮ್ಮ ಕಚೇರಿಯಲ್ಲಿ ದೇಣಿಗೆ ಸಂಗ್ರಹದ ಬಾಕ್ಸ್‌ ಇಟ್ಟಿದ್ದಾರೆ. ಸಂಗ್ರಹವಾಗುವ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುವುದಾಗಿ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next