Advertisement

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

06:42 PM Apr 28, 2024 | Team Udayavani |

ವಾಡಿ: ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಲೇ ಬರುತ್ತಿರುವ ಬಿಜೆಪಿ ಆಡಳಿದಲ್ಲೇ “ಧರ್ಮ” ಸಂಕಷ್ಟದಲ್ಲಿತ್ತು. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಶಕ್ತಿ ಯೋಜನೆಯಿಂದ ದೇವಸ್ಥಾನಗಳು ಭಕ್ತರಿಂದ ಭರ್ತಿಯಾಗುವ ಜತೆಗೆ ದೇವರ ಹುಂಡಿಗಳು ತುಂಬುತ್ತಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

Advertisement

ಕಲಬುರ್ಗಿ ಲೋಕಸಭೆ ಮತಕ್ಷೇತ್ರ ವ್ಯಾಪ್ತಿಯ ಕೊಲ್ಲೂರು ಗ್ರಾಮದಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರ ಮತಯಾಚಿಸಿ ಅವರು ಮಾತನಾಡಿದರು. ‘ತಾವೇ ಧರ್ಮ ರಕ್ಷಕರು ಎಂದು ಬೀಗುತ್ತಿರುವ ಬಿಜೆಪಿಗರು, ಧರ್ಮ ರಕ್ಷಣೆಗೆ ಶೂನ್ಯ ಕೊಡುಗೆ ಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯ ಉಚಿತ ಬಸ್ ಸೌಲಭ್ಯವು ಧರ್ಮಕ್ಷೇತ್ರಗಳ ಚೇತರಿಕೆಗೆ ಕಾರಣವಾಗಿದೆ. ಕೋಟಿ ಸಂಖ್ಯೆಯಲ್ಲಿ ರಾಜ್ಯದ ದೇವಸ್ಥಾನಗಳಿಗೆ ಮಹಿಳೆಯರು ಭೇಟಿ ನೀಡುತ್ತಿದ್ದಾರೆ. ಇದರಿಂದ ಪೂಜಾ ಸಾಮಗ್ರಿಗಳ ವ್ಯಾಪಾರ ಸುಸ್ಥಿತಿಗೆ ಬಂದಿವೆ. ಅರ್ಚಕರ ತಟ್ಟೆಗಳಿಗೂ ಹಣ ಸೇರುತ್ತಿದೆ. ಇದು ಕಾಂಗ್ರೆಸ್ ಸರ್ಕಾರದ ಧರ್ಮ ಕಾಳಜಿ’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಮೆಹಮೂದ್ ಸಾಹೇಬ, ಭೀಮಣ್ಣ ಸಾಲಿ, ಶಿವಾನಂದ ಪಾಟೀಲ, ವೀರಣ್ಣಗೌಡ ಪರಸರೆಡ್ಡಿ, ಮಲ್ಲಿನಾಥಗೌಡ ಸನ್ನತಿ, ಶರಣು ವಾರದ್, ಸಿದ್ದುಗೌಡ ಇಟಗಿ, ಸಿದ್ದುಗೌಡ ಅಫ್ಜಲ್ಪುರ, ಭಾಗಪ್ಪ ಯಾದಗಿರಿ, ಶಿವುರೆಡ್ಡಿಗೌಡ ಈರೆಡ್ಡಿ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next