Advertisement

ಹುಲಿ ಗೆಲ್ಲಬೇಕೋ? ಕತ್ತೆ ಕಿರುಬ ಗೆಲ್ಲಬೇಕೋ?

06:25 AM Jun 29, 2018 | Team Udayavani |

ಕಾರವಾರ: ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌, ಕಮ್ಯುನಿಸ್ಟ್‌, ಜೆಡಿಎಸ್‌, ಸಮಾಜವಾದಿ, ಬಹುಜನ ಸಮಾಜವಾದಿ ಪಕ್ಷ, ಆರ್‌ಜೆಡಿ ಸೇರಿ ಹಲವು ಪಕ್ಷಗಳು ಮೈತ್ರಿ ಸಾಧಿಸಿವೆ. ಕಾಗಣ್ಣ, ನರಿಯಣ್ಣ, ತೋಳಣ್ಣ,  ಕರಡಿ, ಮಂಗಗಳು ಒಂದಾಗಿವೆ. ಆದರೆ ಒಂದು ಕಡೆ ಹುಲಿ ನಿಂತಿದೆ.

Advertisement

2019ರ ಲೋಕಸಭಾ ಚುನಾವಣೆಯಲ್ಲಿ ಕತ್ತೆ ಕಿರುಬ ಗೆಲ್ಲಬೇಕೋ, ಹುಲಿ ಗೆಲ್ಲಬೇಕೋ ಎಂದು ನೀವೇ
ತಿರ್ಮಾನಿಸಿ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್‌ ಹೆಗಡೆ ಹೇಳಿದ್ದಾರೆ. ನಗರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಇವತ್ತು ಪ್ಲಾಸ್ಟಿಕ್‌ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದೇವೆ. ಇದಕ್ಕೆ ಕಾರಣ ಕಾಂಗ್ರೆಸ್‌. ಬಿಜೆಪಿ 70 ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದಿದ್ದರೆ ಬೆಳ್ಳಿ ಕುರ್ಚಿಯಲ್ಲಿ ಕೂರುತ್ತಿದ್ದೆವು. ಬಿಜೆಪಿ ನೇತೃತ್ವದ ಕೇಂದ್ರದ ವಿರುದ್ಧ ಕಾಂಗ್ರೆಸ್‌ ಸೇರಿ ವಿವಿಧ ರಾಜಕೀಯ ಪಕ್ಷಗಳು ಮಹಾ ಮೈತ್ರಿಗೆ ಮುಂದಾಗಿರುವುದು ಸರಿಯಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next