Advertisement

ಅಗ್ನಿ ಅವಘಡ: ಸಚಿವ ಆನಂದಸಿಂಗ್ ಸಾಂತ್ವನ

03:02 PM Apr 10, 2022 | Team Udayavani |

ಮರಿಯಮ್ಮನಹಳ್ಳಿ: ಗುರುವಾರ ರಾತ್ರಿ ನಡೆದ ಅಗ್ನಿ ದುರಂತದಲ್ಲಿ ಕುಟುಂಬದ ಮಗ ಸೊಸೆ ಮೊಮ್ಮಕ್ಕಳನ್ನು ಕಳೆದುಕೊಂಡ ಡಿ. ರಾಘವೇಂದ್ರಶೆಟ್ಟಿ ದಂಪತಿಗೆ ದುಃಖ ಮರೆಸುವ ಶಕ್ತಿ ನೀಡಲಿ ಎಂದು ಬೇಡಿಕೊಳ್ಳುವೆ ಎಂದು ಪ್ರವಾಸೋದ್ಯಮ ಮತ್ತು ಅರಣ್ಯ ಮತ್ತು ಪರಿಸರ ವಿಜ್ಞಾನ ಇಲಾಖೆ ಸಚಿವ ಆನಂದ ಸಿಂಗ್‌ ಹೇಳಿದರು.

Advertisement

ಅವರ ಪಟ್ಟಣದಲ್ಲಿ ಅಗ್ನಿದುರಂತ ಸಂಭವಿಸಿ ಕುಟುಂಬದ ನಾಲ್ಕು ಸದಸ್ಯರನ್ನು ಕಳೆದಕೊಂಡ ಡಿ. ರಾಘವೇಂದ್ರ ಶೆಟ್ಟಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಕುಟುಂಬದವರ ಕುಶಲೋಪರಿ ವಿಚಾರಿಸಿ ಡಿ. ರಾಘವೇಂದ್ರ ಶೆಟ್ಟಿ ದಂಪತಿಯೊಂದಿಗೆ ಮಾತನಾಡಿ ಪುತ್ರ ಶೋಕಂ ನಿರಂತರ ಅನ್ನುತ್ತಾರೆ. ಆದರೆ ನೀವು ಮಗ ಸೊಸೆ ಮೊಮ್ಮಕ್ಕಳನ್ನೂ ಕಳೆದುಕೊಂಡಿದ್ದೀರಿ. ಎಲ್ಲವೂ ವಿಧಿಯಾಟ. ಅದನ್ನು ಯಾರೂ ಮೀರಲು ಸಾಧ್ಯವಿಲ್ಲ. ಆನಂದವನ್ನು ಹಂಚಿಕೊಳ್ಳಬಹುದು ಆದರೆ ದುಃ ಖವನ್ನು ಹಂಚಲಾಗದು. ದೇವರು ಹೆಚ್ಚಿನ ಧೈರ್ಯ ನೀಡಲಿ. ಈ ಸಂಕಷ್ಟ ಹರಿಶ್ಚಂದ್ರನಿಗೂ ತಪ್ಪಿಲ್ಲ ಎಂದು ಸಾಂತ್ವನ ಹೇಳಿದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಇದೊಂದು ದೊಡ್ಡ ದುರಂತ. ಇಂಥ ಘಟನೆಗಳು ಮರುಕಳಿಸಬಾರದು. ಯಾವ ವೈರಿಗೂ ಇಂಥ ಸಂಕಷ್ಟ ಬರಬಾರದು ಎಂದರು. ಇದೇ ಸಂದರ್ಭದಲ್ಲಿ ಶಾಸಕ ಭೀಮಾನಾಯ್ಕ, ವಿಜಯನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಅರುಣ್‌ ಕೆ., ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್‌, ಡಿಎಸ್‌ಪಿ ಹರೀಶ್‌, ಸಿಪಿಐ ಮಂಜಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next