Advertisement

ಸಚಿವ ಸ್ಥಾನ, 25 ಕೋ. ರೂ. ಆಫ‌ರ್‌ ನೀಡಿದರು: ಶರಣ ಗೌಡ ಕಂದಕೂರ

12:35 AM Feb 09, 2019 | Team Udayavani |

ಬೆಂಗಳೂರು: ‘ನನಗೆ ತತ್‌ಕ್ಷಣ ದೇವದುರ್ಗಕ್ಕೆ ಬರುವಂತೆ ಹೇಳಿದರು. ನಾನು ರಾತ್ರಿ 12.30ಕ್ಕೆ ದೇವದುರ್ಗಕ್ಕೆ ಹೊರಟೆ. ಅಲ್ಲಿ ಸರ್ಕಿಟ್ ಹೌಸ್‌ಗೆ ಹೋಗಿ ದೇವದುರ್ಗ ಎಂಎಲ್‌ಎ ಮತ್ತು ಹಾಸನ ಎಂಎಲ್‌ಎ ಪ್ರೀತಂ ಗೌಡ ಇದ್ದರು ಅವರನ್ನು ಭೇಟಿ ಮಾಡಿದ್ದೆ’ ಎಂದು ನಾಗನ ಗೌಡ ಕಂದಕೂರು ಪುತ್ರ ಶರಣ ಗೌಡ ಕಂದಕೂರ ತಿಳಿಸಿದರು.

Advertisement

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಹಾಜರಾಗಿ ತಮಗೆ ಒಡ್ಡಿರುವ ಆಮಿಷದ ಬಗ್ಗೆ ಮಾಹಿತಿ ನೀಡಿದ ಅವರು, ಎಲ್ಲ ಓಕೆ ಆಗಿದೆ. ನಾಳೆ ಸಂಜೆವರೆಗೂ 11 ಜನ ಬರುತ್ತಾರೆ. ನೀನೊಬ್ಬನೇ ಬಂದು ಬಿಡು, ನಿಮ್ಮ ತಂದೆಗೆ ವಯಸ್ಸಾಗಿದೆ. ನಿನ್ನನ್ನು ಜಿಲ್ಲಾ ಉಸ್ತುವಾರಿ ಸಚಿವ ಮಾಡಿ, 25 ಕೋಟಿ ಹಣ ನೀಡುತ್ತೇವೆ. ಹಣಕಾಸಿನ ವ್ಯವಹಾರವನ್ನು ವಿಜಯೇಂದ್ರ ನೋಡಿಕೊಳ್ಳುತ್ತಾರೆ. ಚುನಾವಣೆಗೆ 25 ಕೋಟಿ ರೂ. ನೀಡುತ್ತೇವೆ. ದೊಡ್ಡ ಖಾತೆಯನ್ನು ನೀಡುವುದಾಗಿ ಆಮಿಷ ಒಡ್ಡಿದರು ಎಂದು ಆರೋಪಿಸಿದರು.

ಅದಕ್ಕೂ ಮೊದಲು ದೇವದುರ್ಗ ಶಾಸಕರು ನನ್ನೊಂದಿಗೆ ಮಾತನಾಡಿ, ಸ್ಪೀಕರ್‌ ಅವರನ್ನು 50 ಕೋಟಿ ಬುಕ್‌ ಮಾಡಿದ್ದೀವಿ, ಸುಪ್ರೀಂ ಕೋರ್ಟ್‌ನಲ್ಲಿ ಅಮಿತ್‌ ಶಾ ಎಲ್ಲವನ್ನೂ ನೋಡಿಕೊಳ್ಳುತ್ತಾರೆ ಎಂದು ಹೇಳಿದರು.

ನಾವು ಮೊದಲಿನಿಂದಲೂ ದೇವೇಗೌಡರ ಕುಟುಂಬದ ಜತೆಗಿದ್ದೇವೆ. ನಮ್ಮ ತಂದೆ ದೇವೇಗೌಡರ ಬಗ್ಗೆ ಬಹಳ ಗೌರವ ಇಟ್ಟುಕೊಂಡಿದ್ದಾರೆ. ಹಿರಿಯ ನಾಯಕರು ಈ ರೀತಿ ಮಾಡಿದರೆ, ಭವಿಷ್ಯದಲ್ಲಿ ನಮ್ಮ ಕಥೆ ಏನು ಎಂದು ಪ್ರಶ್ನಿಸಿದ್ದಾಗಿ ಶರಣ ಗೌಡ ಕಂದಕೂರ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next