Advertisement

ನಾಗರ ಪಂಚಮಿ: ರೋಗಿಗಳಿಗೆ ಹಾಲು ವಿತರಣೆ

09:00 AM Jul 28, 2017 | Team Udayavani |

ಬೆಳ್ತಂಗಡಿ: ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘ ಮತ್ತು ದ.ಕ. ಜಿಲ್ಲಾ ಸಹಕಾರಿ ಆಸ್ಪತ್ರೆ, ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಘ ಇದರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು ವಿತರಣೆ ಮಾಡಲಾಯಿತು. ನಾಗರ ಪಂಚಮಿ ಹೆಸರಿನಲ್ಲಿ ಹಾಲನ್ನು ಪೋಲು ಮಾಡುವ ಬದಲು ಬಡ ರೋಗಿಗಳಿಗೆ, ವೃದ್ಧರಿಗೆ, ಅನಾಥ ಮಕ್ಕಳಿಗೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ನೀಡಿ ಅವರ ಬದುಕನ್ನು ಉತ್ತಮಗೊಳಿಸಿ ಎಂದು ಜಾಗೃತಿ ಮೂಡಿಸಲಾಯಿತು. 

Advertisement

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ನ್ಯಾಯವಾದಿ ಸುಕನ್ಯಾ ಎಚ್‌., ಶೇಖರ್‌ ಎಲ್‌., ಉಪನ್ಯಾಸಕ ಸುಜೀತ್‌, ಯಶೋದಾ ಎಸ್‌. ಪೂಜಾರಿ, ಮೀನಾಕ್ಷಿ ಪಡಂಗಡಿ, ಪದ್ಮಾವತಿ ಮುಗುಳಿ, ಪರಿಮಳ, ಎಸ್‌ಎಫ್‌ಐ ನಾಯಕ ಸುಹಾಸ್‌ ಉಪಸ್ಥಿತರಿದ್ದರು. ಆಸ್ಪತ್ರೆಯ ವೈದ್ಯಾಧಿಕಾರಿಗಳು ಸೇರಿದಂತೆ ಸಿಬಂದಿಗಳು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next