Advertisement

ನಾಳೆ ಅಂಬರೀಷ್‌ ಚಿತಾಭಸ್ಮ ವಿಸರ್ಜನೆ; ಸಮಾಧಿಗೆ ಹಾಲು,ತುಪ್ಪ ಕಾರ್ಯ 

12:24 PM Nov 27, 2018 | Team Udayavani |

ಬೆಂಗಳೂರು: ರೆಬೆಲ್‌ಸ್ಟಾರ್‌ ಅಂಬರೀಷ್‌ ಅವರ ಸಮಾಧಿಗೆ ಬುಧವಾರ ಕುಟುಂಬಸ್ಥರು ಹಾಲು , ತುಪ್ಪ  ಬಿಡುವ ಕಾರ್ಯ ಮಾಡುತ್ತಿದ್ದಾರೆ. ಇದೇ ವೇಳೆ ಚಿತಾಭಸ್ಮವನ್ನೂ ಸಂಗ್ರಹಿಸಲಾಗುತ್ತಿದೆ. 

Advertisement

ಕಂಠೀರವ ಸ್ಟುಡಿಯೋದಲ್ಲಿ  ನಾಳೆ ಬೆಳಗ್ಗೆ  ಕುಟುಂಬಸ್ಥರು ಅರ್ಚಕರ ನೇತೃತ್ವದಲ್ಲಿ ಹಾಲು ತುಪ್ಪ ಸಮರ್ಪಿಸಿ, ಚಿತಾಭಸ್ಮವನ್ನು ಸಂಗ್ರಹಿಸಲಿದ್ದಾರೆ. 

ಚಿತಾಭಸ್ಮವನ್ನು ಅಂಬರೀಷ್‌ ಅವರ ಹುಟ್ಟೂರಾದ ಮಂಡ್ಯದ  ಶ್ರೀರಂಗಪಟ್ಟಣದಲ್ಲಿರುವ ಕಾವೇರಿ ನದಿ, ಕಾಶಿಯಲ್ಲಿ  ಮತ್ತು  ಗೋಕರ್ಣದಲ್ಲಿ ವಿಸರ್ಜಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಅಭಿಮಾನಿಗಳ ದಂಡು 
ಕಂಠೀರವ ಸ್ಟುಡಿಯೋ ಬಳಿ ಮಂಗಳವಾರವೂ ಅಭಿಮಾನಿಗಳ ದಂಡು ಆಗಮಿಸುತ್ತಿದ್ದು , ಅಂಬರೀಷ್‌ ಸಮಾಧಿಗೆ ನಮಿಸಿ ಕಂಬನಿ ಮಿಡಿಯುತ್ತಿದ್ದಾರೆ. ಸ್ಥಳದಲ್ಲಿ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಿ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next