Advertisement

ʻಮಿಲ್ಟ್ರಿ ಹೋಟೆಲ್‌ ಊಟಾನೂ ಮಾಡ್ತೀವಿ, ಓಟನ್ನೂ ತಗೋತಿವಿʼ: ಡಾ|ಅಶ್ವತ್ಥನಾರಾಯಣ ವ್ಯಂಗ್ಯ

10:51 PM Apr 13, 2023 | Team Udayavani |

ಮಾಗಡಿ: ಕನಕಪುರದ ಆತಿಥ್ಯವನ್ನೂ ಸ್ವೀಕರಿಸುತ್ತೇವೆ. ಮಿಲ್ಟ್ರಿ ಹೊಟೇಲ್‌ ಊಟವನ್ನೂ ಮಾಡುತ್ತೇವೆ. ಜತೆಗೆ ಜನರ ಓಟನ್ನೂ ಪಡೆಯುತ್ತೇವೆ. ಈ ಬಾರಿ ಕನಕಪುರದಲ್ಲೂ ಜಯಭೇರಿ ನಮ್ಮದೇ ಎಂದು ಡಿಕೆಶಿ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಡಾ| ಅಶ್ವತ್ಥನಾರಾಯಣ ವ್ಯಂಗ್ಯವಾಡಿದರು.

Advertisement

ನಗರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಸಾದ್‌ ಗೌಡ ನಾಮಪತ್ರ ಸಲ್ಲಿಕೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಪಕ್ಷದ ಹಿರಿಯ ನಾಯಕ ಆರ್‌. ಆಶೋಕ್‌ ಅವರನ್ನು ಕನಕಪುರದಿಂದ ಕಣಕ್ಕೆ ಇಳಿಸಿದ್ದಾರೆ. ಕನಕಪುರದಲ್ಲಿ ಡಿ.ಕೆ. ಶಿವಕುಮಾರ್‌ ವಿರುದ್ಧ ಅಲೆಯಿದೆ. ಅವರ ಬಗ್ಗೆ ಸಂಪೂರ್ಣ ಅತೃಪ್ತಿ ಇದೆ. ಇದರಿಂದ ಇಲ್ಲಿ ಬಿಜೆಪಿ ಸಂಪೂರ್ಣವಾಗಿ ಗೆಲ್ಲುವ ವಿಶ್ವಾಸವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next