Advertisement

ಪಡಿತರ ಇಲ್ಲದ ವಲಸೆ ಕಾರ್ಮಿಕರಿಗೆ ಪಡಿತರ

11:04 AM May 23, 2020 | mahesh |

ಮಂಗಳೂರು/ ಉಡುಪಿ: ಕೇಂದ್ರದ “ಆತ್ಮನಿರ್ಭರ್‌ ಭಾರತ’ ಯೋಜನೆಯಡಿ ಪಡಿತರ ಚೀಟಿ ಹೊಂದದೇ ಇರುವ ವಲಸೆ ಕಾರ್ಮಿಕರಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಮೇ ತಿಂಗಳಿನಲ್ಲಿ ಅಕ್ಕಿ ಹಾಗೂ ಜೂನ್‌ ತಿಂಗಳಿನಲ್ಲಿ ಅಕ್ಕಿ ಮತ್ತು ಕಡಲೆ ಕಾಳು ದೊರೆಯಲಿದೆ.

Advertisement

ಹೊರ ತಾಲೂಕು / ಜಿಲ್ಲೆ/ ರಾಜ್ಯದ ವಲಸೆ ಕಾರ್ಮಿಕರು ನ್ಯಾಯಬೆಲೆ ಅಂಗಡಿಗಳಲ್ಲಿ ತಮ್ಮ ಆಧಾರ್‌ ಕಾರ್ಡನ್ನು ಹಾಜರುಪಡಿಸಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ಆಧಾರ ಸಂಖ್ಯೆಯನ್ನು ಆನ್‌ಲೈನ್‌ ತಂತ್ರಾಂಶದಲ್ಲಿ ಪರಿಶೀಲಿಸಿ ಅವರ ಮೊಬೈಲ್‌ ಸಂಖ್ಯೆಗೆ ಒಟಿಪಿ ಬಂದ ಅನಂತರ ಪಡಿತರ ವಿತರಿಸಲಾಗುವುದು. ಮೇ ತಿಂಗಳಿನಲ್ಲಿ (ಮೇ 26ರಿಂದ 31) ಪ್ರತೀ ಫಲಾನುಭವಿಗೆ 5 ಕೆಜಿ ಅಕ್ಕಿ ಹಾಗೂ ಜೂನ್‌ನಲ್ಲಿ (ಜೂ.1 ರಿಂದ 10) 5 ಕೆಜಿ ಅಕ್ಕಿ ಮತ್ತು ಕಡಲೆ ಕಾಳನ್ನು ವಿತರಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next