Advertisement

ಪೊಲೀಸರ ವಿರುದ್ಧ ಸಂಸದೆ ನವನೀತ್‌ ದೂರು ಹಿನ್ನೆಲೆ ಈ ಕ್ರಮ: ಮಹಾ ವರದಿ ಕೇಳಿದ ಕೇಂದ್ರ

12:49 AM Apr 27, 2022 | Team Udayavani |

ಮುಂಬಯಿ: ಸಿಎಂ ಉದ್ಧವ್‌ ಠಾಕ್ರೆ ನಿವಾಸದ ಮುಂದೆ ಹನುಮಾನ್‌ ಚಾಲೀಸಾ ಪಠನ ಮಾಡುವುದಾಗಿ ಘೋಷಿಸಿ ಬಂಧಿತರಾಗಿರುವ ಸಂಸದೆ ನವನೀತ್‌ ರಾಣಾ ಪೊಲೀಸರ ವಿರುದ್ಧ ಮಾಡಿರುವ ಆರೋಪಗಳಿಗೆ ಸಂಬಂಧಿಸಿ ಕೇಂದ್ರ ಗೃಹ ಇಲಾಖೆ ಮಂಗಳವಾರ ಮಹಾರಾಷ್ಟ್ರ ಸರಕಾರದಿಂದ ವರದಿ ಕೇಳಿದೆ.

Advertisement

ಪೊಲೀಸರು ನನ್ನನ್ನು ಅಮಾ ನವೀಯವಾಗಿ ನಡೆಸಿ ಕೊಳ್ಳುತ್ತಿ ದ್ದಾರೆ, ಕುಡಿಯಲು ನೀರೂ ಕೊಡುತ್ತಿಲ್ಲ ಎಂದು ನವನೀತ್‌ ಆರೋಪಿಸಿದ್ದರು.

ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆಯು, ಈ ಆರೋಪಗಳಿಗೆ ಸಂಬಂಧಿಸಿ ವರದಿ ನೀಡುವಂತೆ ಸರಕಾರಕ್ಕೆ ಸೂಚನೆ ನೀಡಿದೆ.

ಪೊಲೀಸರಿಂದ ವೀಡಿಯೋ
ನವನೀತ್‌ ಆರೋಪದ ಬೆನ್ನಲ್ಲೇ ಮುಂಬಯಿ ಪೊಲೀಸ್‌ ಆಯುಕ್ತ ಸಂಜಯ್‌ ಪಾಂಡೆ ಅವರು ಮಂಗಳವಾರ ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಪೊಲೀಸ್‌ ಠಾಣೆಯಲ್ಲಿ ನವನೀತ್‌ ಚಹಾ ಸೇವಿಸುತ್ತಿರುವ ದೃಶ್ಯವಿದೆ. ಈ ವೀಡಿಯೋ ಪೋಸ್ಟ್‌ ಮಾಡಿರುವ ಆಯುಕ್ತರು, “ನಾವು ಇನ್ನೂ ಏನಾದರೂ ಹೇಳಲು ಬಾಕಿಯಿದೆಯೇ?’ ಎಂದು ಪ್ರಶ್ನಿಸಿ ಟ್ವೀಟ್‌ ಮಾಡಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next