Advertisement

ಎಂಜಿಎಂ ಕಾಲೇಜು ಪುನರಾರಂಭ : ಉಡುಪಿಯಲ್ಲಿ ಶಾಂತಿಯುತ ವಾತಾವರಣ

01:15 PM Feb 18, 2022 | Team Udayavani |

ಉಡುಪಿ : ಹಿಜಾಬ್ ಮತ್ತು ಕೇಸರಿ ಶಾಲಿನ ಸಂಘರ್ಷದ ಬಳಿಕ ಬಂದ್ ಮಾಡಲಾಗಿದ್ದ ಉಡುಪಿಯ ಎಂಜಿಎಂ ಕಾಲೇಜು 10 ದಿನದ ನಂತರ ಓಪನ್ ಮಾಡಲಾಗಿದ್ದು, ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ.

Advertisement

ಕ್ಯಾಂಪಸ್ ನ ಲ್ಲಿ ಫೆ.8 ಕ್ಕೆ ಜಟಾಪಟಿ ನಡೆದ ಹಿನ್ನಲೆಯಲ್ಲಿ ಎಂಜಿಎಂ ಕಾಲೇಜ್ ಬಳಿ ಇಂದು ಶುಕ್ರವಾರ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು,ಕೆಎಸ್ಆರ್ ಪಿ ಪೊಲೀಸರನ್ನ ಎಸ್ಪಿ ಅವರು ನಿಯೋಜನೆ ಮಾಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ಪೊಲೀಸರ ರವಾನೆ ಮಾಡಲಾಗಿದೆ.

ಹತ್ತು ದಿನ ರಜೆ ನಂತರ ಎಂಜಿಎಂ ಪದವಿ ವಿಭಾಗ ಓಪನ್ ಮಾಡಲಾಗಿದ್ದು, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಆಡಳಿತ ಮಂಡಳಿ ಗೇಟಿನಲ್ಲಿ ಬೋರ್ಡ್ ಹಾಕಲಾಗಿದೆ. ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಇಂದು ದ್ವಿತೀಯ ಪಿಯುಸಿ ಕೆಮೆಸ್ಟ್ರಿ ಪ್ರಾಕ್ಟಿಕಲ್ ಪರೀಕ್ಷೆ ನಡೆಸಲಾಗುತ್ತಿದೆ.

ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಲ್ಲಿ ಶಾಂತಿಯುತ ವಾತಾವರಣ ಇದೆ. ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಎಂಜಿಎಂ ಕಾಲೇಜಿನಲ್ಲೂ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜಿಗೆ ಆಗಮಿಸುತ್ತಿದ್ದಾರೆ. ಡಿಗ್ರಿ ಕಾಲೇಜಿನಲ್ಲೂ ಯಾವುದೇ ಗೊಂದಲವಿಲ್ಲ ಎಂದು ಎಎಸ್ ಪಿ ಸಿದ್ದಲಿಂಗಪ್ಪ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next