Advertisement

ಮೆಸ್ಕಾಂನ 185 ಕಂಬ ಧರಾಶಾಯಿ

12:35 PM May 29, 2018 | Team Udayavani |

ಉಡುಪಿ: ಭಾರೀ ಗಾಳಿ, ಮಳೆಯಿಂದಾಗಿ ಉಡುಪಿ ಜಿಲ್ಲೆಯಲ್ಲಿ ಸುಮಾರು 185 ಕಂಬಗಳು ಧರಾಶಾಯಿಯಾಗಿ ಮೆಸ್ಕಾಂಗೆ ಭಾರೀ ನಷ್ಟ  ಉಂಟಾಗಿದೆ. ಕಂಬಗಳಲ್ಲಿದ್ದ ಇನ್ಸುಲೇಟರ್‌ ಕೂಡ ಹೆಚ್ಚಿನ ಪ್ರಮಾಣದಲ್ಲಿ ಪಂಕ್ಚರ್‌ ಆಗಿವೆ. ಗದ್ದೆಗಳಲ್ಲಿ ನೀರು ನಿಂತ ಪ್ರದೇಶದಲ್ಲಿರುವ ಕಂಬಗಳಲ್ಲಿ ಇನ್ಸುಲೇಟರ್‌ ಹಾಳಾಗಿದ್ದು ಗೊತ್ತಾಗದೆ ವಿದ್ಯುತ್‌ ಸರಬರಾಜು ಕಲ್ಪಿಸುವಲ್ಲಿ ವಿಳಂಬವಾಗುತ್ತಿದೆ. ಅದರ ನಡುವೆ ಮಳೆಯೂ ಕೆಲಸಕ್ಕೆ ಅಡಚಣೆ ಮಾಡುತ್ತಿದೆ.

Advertisement

ಕಂಬವನ್ನು ಬದಲಾಯಿಸಿ ತಂತಿ ಅಳವಡಿಸಿಕೊಂಡು ಆದಷ್ಟು ಬೇಗನೆ ವಿದ್ಯುತ್‌ ಒದಗಿಸಲು ಅಧಿಕಾರಿ, ಸಿಬಂದಿಗಳು ಕಾರ್ಯನಿರತರಾಗಿದ್ದಾರೆ ಎಂದು ಮೆಸ್ಕಾಂ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next