Advertisement

ಅಧಿವೇಶನ ವಿರುದ್ಧ ಎಂಇಎಸ್‌ ಮರಾಠಿ ಮಹಾ ಮೇಳಾವ್‌!

07:10 AM Nov 13, 2017 | |

ಬೆಳಗಾವಿ: ಉತ್ತರ ಕರ್ನಾಟಕದ ವಿಕಾಸಕ್ಕಾಗಿ ಗಡಿ ನೆಲ ಬೆಳಗಾವಿಯಲ್ಲಿ ಸರಕಾರ ನಡೆಸುತ್ತಿರುವ ಚಳಿಗಾಲದ ಅಧಿವೇಶನ ವಿರೋಧಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಮರಾಠಿ ಮಹಾ ಮೇಳಾವ್‌ ನಡೆಸಿ ಕರ್ನಾಟಕ ಸರಕಾರಕ್ಕೆ ಸಡ್ಡು ಹೊಡೆಯಲು ಸಜ್ಜಾಗಿದೆ.

Advertisement

ಈ ಸಲ ರಾಷ್ಟ್ರವಾದಿ ಕಾಂಗ್ರೆಸ್‌ (ಎನ್‌ಸಿಪಿ)ನ ಇಬ್ಬರು ನಾಯಕರು ಪ್ರಮುಖ ಭಾಷಣಕಾರರಾಗಿ ಆಗಮಿಸಲಿದ್ದಾರೆ. ಮಹಾರಾಷ್ಟ್ರ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಧನಂಜಯ ಮುಂಡೆ, ಮಾಜಿ ಸಚಿವ ಜಯವಂತ ದಳವಿ, ಸಂಸದ ಧನಂಜಯ ಮಹಾಡಿಕಗೆ ಮೇಳಾವ್‌ಕ್ಕೆ ಹೋಗುವಂತೆ ಎನ್‌ಸಿಪಿ ಪರಮೋಚ್ಚ ನಾಯಕ ಶರದ ಪವಾರ ಖಡಕ್‌ ಸೂಚನೆ ನೀಡಿದ್ದಾರೆ. 

ಶರದ ಪವಾರ ಆಗಮಿಸದಿದ್ದರೂ ಅವರು ಬರೆದ ಪತ್ರವನ್ನು ಎಂಇಎಸ್‌ ನಾಯಕರು ಮೇಳಾವ್‌ದಲ್ಲಿ ಓದಲಿದ್ದಾರೆ.
1986ರಲ್ಲಿ ಕನ್ನಡ ವಿರೋಧಿ ಸಮಾವೇಶಕ್ಕೆ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಆಗ ಶರದ ಪವಾರ ಹಾಗೂ ಛಗನ್‌ ಭುಜಬಲ ವೇಷ ಬದಲಿಸಿಕೊಂಡು ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ಸಲವೂ ಅನುಮತಿ ಸಿಗದಿದ್ದರೆ ಎನ್‌ಸಿಪಿ ಮುಖಂಡರು ಹೇಗಾದರೂ ಮಾಡಿ ಭಾಗವಹಿಸುವಂತೆ ಪವಾರ ಸೂಚನೆ ನೀಡಿದ್ದಾರೆ ಎಂದು ಎಂಇಎಸ್‌ ನಾಯಕರು
ತಿಳಿಸಿದ್ದಾರೆ.

ಜೊತೆಗೆ, ಬೆಳಗಾವಿ ದಕ್ಷಿಣ ಕ್ಷೇತ್ರದ ಎಂಇಎಸ್‌ ಬೆಂಬಲಿತ ಶಾಸಕ ಸಂಭಾಜಿ ಪಾಟೀಲ ಹಾಗೂ ಖಾನಾಪುರ ಶಾಸಕ ಅರವಿಂದ ಪಾಟೀಲ ಅವರು ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಆಗಮಿಸಿ ನಂತರ ಮೇಳಾವ್‌ದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿ ವರ್ಷದಂತೆ ಈ ಸಲವೂ ಮಹಾರಾಷ್ಟ್ರ ಪರ ಘೋಷಣೆ ಕೂಗಿ ಕಲಾಪದಿಂದ ಹೊರ ನಡೆದು ಮೇಳಾವ್‌ದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಮೇಳಾವ್‌ಕ್ಕೆ ಹೆಚ್ಚಿನ ಜನರನ್ನು ಸೇರಿಸಲು ಎಂಇಎಸ್‌ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದೆ. ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ಗಳ ಮೂಲಕ ಪ್ರಚಾರ ನಡೆಸುತ್ತಿದೆ. ಕನ್ನಡ ವಿರುದಟಛಿ ಬರೆದ ಪೋಸ್ಟ್‌ಗಳನ್ನು ಅಪ್‌ಲೋಡ್‌ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಎಂಇಎಸ್‌ ನಾಯಕರು ಸಭೆ ನಡೆಸಿ ಜನರನ್ನು ಆಹ್ವಾನಿಸುತ್ತಿದ್ದಾರೆ. ಆದರೆ, ಸದ್ಯ ಹೊಲಗಳಲ್ಲಿ ರಾಶಿ ಕಾರ್ಯ ನಡೆಯುತ್ತಿರುವುದರಿಂದ ಹೆಚ್ಚಿನ ಜನ ಸೇರುವುದು ಅಸಾಧ್ಯ.

Advertisement

ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next