Advertisement

ಬೆಳಗಾವಿಯಲ್ಲಿ ಎಂಇಎಸ್‌ ಕರಾಳ ದಿನಾಚರಣೆ ; ಪೊಲೀಸರಿಂದ ಲಾಠಿ ಚಾರ್ಜ್‌ 

02:43 PM Nov 01, 2018 | |

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವದ ವೇಳೆ ಗಡಿನಾಡು ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತೆ ಪುಂಡಾಟ ತೋರಿದೆ. ಗುರುವಾರ ಕಪ್ಪು ಬಟ್ಟೆಗಳನ್ನು ಧರಿಸಿದ ಸಾವಿರಾರು ಮಂದಿ ಬೃಹತ್‌ ಮೆರವಣಿಗೆ ಮೂಲಕ ನಾಡ ದ್ರೋಹಿ ಘೋಷಣೆಗಳನ್ನು ಕೂಗಿದ್ದಾರೆ. 

Advertisement

ಪ್ರತಿಭಟನಾ ಮೆರವಣಿಗೆ ಬಸವೇಶ್ವರ ವೃತ್ತದ ಬಳಿ ಆಗಮಿಸಿದಾಗ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರೊಂದಿಗೆ ವಾಗ್ವಾದ ನಡೆದಿದೆ. ಈ ವೇಳೆ ಕೆಲವರು ಪೊಲೀಸ್‌ ವಾಹನದ ಮೇಲೆ ಪಟಾಕಿ ಎಸೆದಿದ್ದಾರೆ. 

ಪೊಲೀಸರು ಉದ್ರಿಕ್ತರನ್ನು ಲಾಠಿ ಚಾರ್ಜ್‌ ನಡೆಸುವ ಮೂಲಕ ಚದುರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next