Advertisement

ಸ್ಪೀಕರ್ ಕಾಗೇರಿ ಅವರ ಬಳಿ‌ ‘ಕರುಣೆ ತೋರಿ’ಎಂದ ಡಿ.ಕೆ.ಶಿವಕುಮಾರ್!

03:25 PM Mar 25, 2022 | Team Udayavani |

ವಿಧಾನಸಭೆ : ನಾನು ವಿಧಾನಸಭೆಗೆ ಬರುತ್ತಿಲ್ಲ ಎಂದು ಎಲ್ಲರೂ ಹೇಳುತ್ತಾರೆ. ಆದರೆ ನೀವು ಮಾತ್ರ‌ ನನ್ನ ಮೇಲೆ ಕರುಣೆ ತೋರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪೀಕರ್ ಕಾಗೇರಿ ಅವರಿಗೆ ಮನವಿ ಮಾಡಿದರು.

Advertisement

ಬೇಡಿಕೆ ಮೇಲಿನ‌ ಚರ್ಚೆ ಮುಕ್ತಾಯ ಆಗಿದೆ ಎಂದು ಸ್ಪೀಕರ್ ಘೋಷಣೆ ಮಾಡಿದ ನಂತರ ಶಿವಕುಮಾರ್ ಮಾತನಾಡುವುದಕ್ಕೆ ಅವಕಾಶ ಕೋರಿದರು.‌ಇದಕ್ಕೆ ಸ್ಪೀಕರ್ ನಿರಾಕರಿಸಿದರು.

ನಾನು ಅಸೆಂಬ್ಲಿಗೆ ಬರುತ್ತಿಲ್ಲ ಎಂದು ಎಲ್ಲರೂ ಹೇಳುತ್ತಾರೆ‌. ನೀವು ನೋಡಿದರೆ ನನ್ನ ಮೇಲೆ ಕರುಣೆ ತೋರುವುದಿಲ್ಲ ಅಲ್ಲವೇ ಎಂದರು. ಸ್ಪೀಕರ್,ನೀವು ರಾಜ್ಯ ಸುತ್ತುತ್ತಿರುವಯದನ್ನು  ಪೇಪರ್ ನಲ್ಲಿ ನೋಡಿದ್ದೇನೆ. ಈಗ ಚರ್ಚೆ ಮುಗಿದಿದೆ ಮಾತನಾಡುವುದಕ್ಕೆ ಅವಕಾಶವಿಲ್ಲ‌ ಎಂದರು.

ಕಳೆದ ಹಲವು ದಿನಗಳಿಂದ ಸದನಕ್ಕೆ ಶಿವಕುಮಾರ್ ಗೈರಾಗುತ್ತಿರುವುದು ವಿಧಾನಸಭೆಯ ಮೊಗಸಾಲೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next