Advertisement

ಕುದುರೆಯನ್ನು ಹಿಂಸಿಸಿ ಕೊಂದ ಕೃತ್ಯ:ಪೊಲೀಸ್‌ ಅಧಿಕಾರಿಗಳೂ ಶಾಮೀಲು

11:32 AM Aug 09, 2017 | Team Udayavani |

ಜಿಂದ್‌, ಹರಿಯಾಣ: ಕುದುರೆಯೊಂದನ್ನು ಹಗ್ಗದಿಂದ ಬಿಗಿದು, ನಿರ್ದಯವಾಗಿ ಹೊಡೆದು ಹಿಂಸಿಸಿ ಉಸಿರುಗಟ್ಟಿಸಿ ಸಾಯಿಸಲಾದ ಅಮಾನುಷ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ. 

Advertisement

ಅತ್ಯಂತ ನಾಚಿಕೆಗೇಡಿನ ಈ ಅಮಾನುಷ ಕೃತ್ಯವು ಹರಿಯಾಣದ ಜಿಂದ್‌ ಪ್ರದೇಶದ ಗೊಹಾನಾ ರಸ್ತೆ ಸಮೀಪದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿ ಹತ್ತು ಜನರ ಮೇಲೆ ಮೂಕ ಪ್ರಾಣಿಯ ಮೇಲೆ ತೋರಲಾದ ಅಮಾನುಷ ಕೃತ್ಯಕ್ಕಾಗಿ ಪೊಲೀಸರು ಕೇಸ್‌ ಬುಕ್‌ ಮಾಡಿದ್ದಾರೆ.

ವಿಡಿಯೋದಲ್ಲಿ ಕಂಡು ಬರುವಂತೆ ಕೆಲವು ಜನರು ಕುದುರೆಯ ಕಾಲುಗಳನ್ನು ಹಗ್ಗದಲ್ಲಿ ಬಿಗಿದು, ಅದನ್ನು ಎಲ್ಲ ದಿಕ್ಕುಗಳಿಂದ ಎಳೆದಾಡಿ,  ದೊಣ್ಣೆಗಳಿಂದ ಹೊಡೆದು ಹಿಂಸಿಸುತ್ತಾರೆ. ಅದರ ಕುತ್ತಿಗೆಯನ್ನೂ ಹಗ್ಗದಲ್ಲಿ ಬಿಗಿದು ಉಸಿರುಗಟ್ಟಿಸಿ ಸಾಯಿಸುತ್ತಾರೆ.

ಅತ್ಯಂತ ವಿಚಿತ್ರವೆಂದರೆ ಜನರು ಮೂಕ ಪ್ರಾಣಿ ಕುದುರೆಯ ಮೇಲೆ ಈ ರೀತಿಯ ನಿರ್ದಯ ಹಿಂಸೆ ತೋರುವಾಗ ಎಎಸ್‌ಐ ರಾಜೀಂದರ್‌ ಕುಮಾರ್‌ ಮತ್ತು ವಿಶೇಷ ರಕ್ಷಣಾಧಿಕಾರಿ ಸುಭಾಶ್‌ ಎಂಬವರು ಜನರ ಕೃತ್ಯದಲ್ಲಿ ಅವರಿಗೆ ನೆರವಾಗುವುದು ವಿಡಿಯೋದಲ್ಲಿ ಕಂಡು ಬರುತ್ತದೆ. 

ವಿಡಿಯೋದಲ್ಲಿ ಕಂಡುಬಂದಿರುವ ಈ ಇಬ್ಬರೂ ಅಧಿಕಾರಿಗಳನ್ನು ಈಗ ವರ್ಗಾಯಿಸಲಾಗಿದ್ದು ಅವರ ವಿರುದ್ಧ ಇಲಾಖಾ ತನಿಖೆಯನ್ನು ಆರಂಭಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next