Advertisement

ಶ್ರೀನಗರ: ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಪಾಸ್‌ಪೋರ್ಟ್‌ ಅರ್ಜಿ ತಿರಸ್ಕಾರ

07:02 PM Mar 29, 2021 | Team Udayavani |

ಶ್ರೀನಗರ: ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಅವರ ಪಾಸ್‌ಪೋರ್ಟ್‌ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಪೊಲೀಸರು ಸಲ್ಲಿಸಿರುವ ವರದಿ “ತೃಪ್ತಿದಾಯಕವಾಗಿಲ್ಲ’ ಎಂಬ ಕಾರಣದ ಹಿನ್ನೆಲೆಯಲ್ಲಿ ಮೆಹಬೂಬಾ ಅರ್ಜಿ ತಿರಸ್ಕರಿಸಲಾಗಿದೆ. ಈ ಬಗ್ಗೆ ಶ್ರೀನಗರದಲ್ಲಿರುವ ಪ್ರಾದೇಶಕ ಪಾಸ್‌ಪೋರ್ಟ್‌ ಕಚೇರಿಯ ಅಧಿಕಾರಿ ಮಾಜಿ ಸಿಎಂಗೆ ಪತ್ರ ಬರೆದಿದ್ದಾರೆ.

Advertisement

ಕೇಂದ್ರಾಡಳಿತ ಪ್ರದೇಶದ ಅಪರಾಧ ಪತ್ತೆ ದಳ ಅರ್ಜಿ ತಿರಸ್ಕರಿಸುವಂತೆ ವರದಿ ಸಲ್ಲಿಸಿದೆ. ಈ ಬಗ್ಗೆ ಪ್ರಶ್ನೆಗಳಿದ್ದಲ್ಲಿ ನೇರವಾಗಿ ವಿದೇಶಾಂಗ ಸಚಿವಾಲಯಕ್ಕೇ ದೂರು ನೀಡಬಹುದು ಎಂದು ಪ್ರಾದೇಶಿಕ ಪಾಸ್‌ಪೋರ್ಟ್‌ ಅಧಿಕಾರಿ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಮೆಹಬೂಬಾ ಮುಫ್ತಿ ಮಾಜಿ ಮುಖ್ಯಮಂತ್ರಿಗಳು ದೇಶಕ್ಕೆ ಬೆದರಿಕೆಯೊಡ್ಡುವಂಥವರಾಗಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ :ಹೋಳಿ ಸೌಹಾರ್ದತೆ ಮತ್ತು ಸಾಮರಸ್ಯದ ಸಂಕೇತ : ಮದನ್ ಮಿತ್ರ  

Advertisement

Udayavani is now on Telegram. Click here to join our channel and stay updated with the latest news.

Next