Advertisement

ಭಾವೈಕ್ಯತೆಯ ಪ್ರತೀಕ ಮೆಹಬೂಬ್‌ ಸುಬ್ಹಾನಿ ಉರುಸ್‌

04:47 PM Dec 19, 2018 | |

ಗಜೇಂದ್ರಗಡ: ಮತೀಯ ಭಾವನೆ ಹೋಗಲಾಡಿಸಿ ಭಾತೃತ್ವದ ಮಧುರ ಬಾಂಧವ್ಯದ ಬೆಸುಗೆಯನ್ನು ಗಟ್ಟಿಗೊಳಿಸುವ ಅಪರೂಪದ ತಾಣಗಳಲ್ಲಿ ಒಂದಾದ ಪಟ್ಟಣದ ಗುಡ್ಡದ ಮೇಲ್ಭಾಗದಲ್ಲಿರುವ ಹಜರತ್‌ ಸೈಯ್ಯದ್‌ ಶಹಾ ಮೆಹಬೂಬ ಸುಬ್ಹಾನಿ ಅವರ ಉರುಸು ಸೌಹಾರ್ದತೆಗೆ ಸಾಕ್ಷಿಯಾಗಿದೆ.

Advertisement

ಗಜೇಂದ್ರಗಡ ಹತ್ತು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಅಲ್ಲದೇ ಭಾತೃತ್ವದ ಕೇಂದ್ರ ಸ್ಥಳವಾಗಿದೆ. ಈ ಪುಣ್ಯ ಭೂಮಿಯಲ್ಲಿ ಆಡಳಿತ ನಡೆಸಿದ ಮರಾಠ ಸಾಮಂತರು ಸರ್ವ ಧರ್ಮಿಯರೂ ಒಟ್ಟಾಗಿ ಬದುಕು ನಡೆಯಬೇಕೆನ್ನುವ ಉದ್ದೇಶದಿಂದ 18 ಮಠ, 18 ಮಸೀದಿ, 18 ಬಾವಿಗಳನ್ನು ನಿರ್ಮಿಸಿದ್ದರು. ಅಂತೆಯೇ ಬೆಟ್ಟದ ಮೇಲ್ಭಾಗದಲ್ಲಿಯೂ ಹಿಂದು ಮತ್ತು ಮುಸ್ಲಿಂ ದೇವಾಲಯ ನಿರ್ಮಾಣ ಮಾಡುವ ಮೂಲಕ ಭಾವೈಕ್ಯತೆಗೆ ಮುನ್ನುಡಿ ಬರೆದಿದ್ದಾರೆ.

ಉರುಸು ಎಂಬಂದು ಸಾಧುಗಳ ಪುಣ್ಯತಿಥಿ. ಹೀಗಾಗಿ ಜಾತ್ರೆಯಂತೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಗುವುದು. ಪ್ರಸ್ತುತ ದಿನಗಳಲ್ಲಿ ಜಾತೀಯತೆಯ ವಾದ ಪ್ರತಿವಾದಗಳ ಮಧ್ಯೆಯೇ ಪಟ್ಟಣದ ಗುಡ್ಡದ ಮೇಲ್ಭಾಗದಲ್ಲಿ ನಡೆಯುವ ಮೆಹಬೂಬ ಸುಬ್ಹಾನಿ ಉರುಸು ವಿಶೇಷತೆಗಳಿಗೆ ಕಾರಣವಾಗಿದೆ. ಇಲ್ಲಿ ಹಿಂದೂ-ಮುಸ್ಲಿಮರು ಭೇಟಿ ನೀಡಿ ಶರಣರ ಸಮಾಧಿ ಸ್ಥಳಕ್ಕೆ ಭಕ್ತಿ ಭಾವದಿಂದ ಪೂಜೆ ಸಲ್ಲಿಸುತ್ತಾರೆ.

ದರ್ಗಾಕ್ಕೆ ಪ್ರತಿ ಗುರುವಾರ ಮತ್ತು ಅಮವಾಸೆ ದಿನದಂದು ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಹರಕೆ, ಪೂಜೆ ಸಲ್ಲಿಸುತ್ತಾರೆ. ಸೂಫಿ ಪಂಥದವರಾದ ಹಜರತ್‌ ಸೈಯ್ಯದ್‌ ಶಹಾ ಮೆಹಬೂಬ ಸುಬ್ಹಾನಿ ಅವರು ಹಲವು ದಶಕಗಳ ಹಿಂದೆ ಗಜೇಂದ್ರಗಡಕ್ಕೆ ಭೇಟಿ ನೀಡಿದ್ದರು. ಧರ್ಮ ಪ್ರಚಾರಕ್ಕಿಂತ ಸೌಹಾರ್ದತೆ, ಸಹಬಾಳ್ವೆಗೆ ಒತ್ತು ನೀಡಿ, ಸತ್ಯ ನಿಷ್ಠೆಗೆ ಹೆಸರಾಗಿ ಸಮಾನತೆಯ ಸಂದೇಶ ಸಾರಿದ್ದಾರೆ ಎಂಬುದು ಇತಿಹಾಸ ಪ್ರತೀತ.

ಹಜರತ್‌ ಸೈಯ್ಯದ್‌ ಶಹಾ ಮೆಹಬೂಬ ಸುಬ್ಹಾನಿ ಅವರು ಈ ಭಾಗದ ಹಳ್ಳಿಗಳಲ್ಲಿ ಭಾವೈಕ್ಯತೆಯ ಸಂದೇಶ ಪಸರಿಸಿದ ಕೀರ್ತಿ ಅವರದ್ದಾಗಿದೆ. ನಂತರ ಅವರು ಗಜೇಂದ್ರಗಡ ಬೆಟ್ಟ ಮೇಲೆ ನೆಲೆ ನಿಂತರು. ಅವರ ಕಾಲಾ ನಂತರ ಅಲ್ಲಿಯೇ ಅವರ ಗದ್ದುಗೆ ಸ್ಥಾಪಿಸಲಾಯಿತು. ಅಂದಿನಿಂದ ಇಲ್ಲಿಯವರೆಗೂ ಸರ್ವ ಸಮುದಾಯ ಜನರು ಉರುಸು ದಿನದಂದು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

Advertisement

ಉರುಸು ಆಚರಣೆ
ಐತಿಹಾಸಿಕ ಹಿನ್ನೆಲೆ ಹೊಂದಿರುವ ಬೆಟ್ಟದ ಮೇಲಿನ ಮೆಹಬೂಬ್‌ ಸುಬ್ಹಾನಿ ಅವರ ಭಾವೈಕ್ಯತಾ ಉರುಸು ಕಾರ್ಯಕ್ರಮ ಈಗಾಲೇ ಪ್ರಾರಂಭವಾಗಿದೆ. ಡಿ. 19ರಂದು ಭಾವೈಕ್ಯತಾ ಉರುಸು, ಡಿ. 20 ರಂದು ಜಿಯಾರತ್‌ ನಡೆಯಲಿದೆ. ಇಲ್ಲಿ ಯಾವುದೇ ಜಾತಿ ಮತ್ತು ಧರ್ಮಕ್ಕೆ ಸೀಮಿತವಾಗದೆ ಎಲ್ಲ ಜನಾಂಗ ಮತ್ತು ಧರ್ಮಿಯರು ಒಟ್ಟುಗೂಡಿ ಹತ್ತಾರು ದಶಕದಿಂದ ಉರುಸು ಆಚರಿಸುತ್ತಿದ್ದಾರೆ. 

ಸರ್ವ ಜನಾಂಗದ ಶಾಂತಿಯ ತೋಟದಂತಿರುವ ಗಜೇಂದ್ರಗಡದಲ್ಲಿ ಎಲ್ಲ ಧರ್ಮಿಯರು ಭಾವ್ಯಕ್ಯತೆಯಿಂದ ಜಾತ್ರೆಗಳು, ಉರುಸುಗಳನ್ನು ಆಚರಿಸುತ್ತಾ ಬರಲಾಗಿದೆ. ಅಂತೆಯೇ ಗುಡ್ಡದ ಮೇಲ್ಭಾಗದಲ್ಲಿರುವ ಹಜರತ್‌ ಮೆಹಬೂಬ ಸುಬ್ಹಾನಿ ಅವರ ಉರುಸು ಸೌಹಾರ್ದತೆ ಪ್ರತೀಕವಾಗಿದೆ.
 ಐ.ಎ. ರೇವಡಿ,ಕಸಾಪ ತಾಲೂಕಾಧ್ಯಕ್ಷ 

Advertisement

Udayavani is now on Telegram. Click here to join our channel and stay updated with the latest news.

Next