Advertisement

ಮೇಘಾಲಯದ ಪ್ರಮುಖ ಬಂಡುಕೋರ ಸೋಹನ್‌ ಹತ್ಯೆ

07:00 AM Feb 25, 2018 | Team Udayavani |

ಶಿಲ್ಲಾಂಗ್‌: ಮೇಘಾಲಯದ ಪ್ರಮುಖ ಬಂಡುಕೋರ, ನಿಷೇಧಿತ ಸಂಘಟನೆ ಗಾರೊ ನ್ಯಾಶನಲ್‌ ಲಿಬರೇಷನ್‌ ಆರ್ಮಿ (ಜಿಎನ್‌ಎಲ್‌ಎ)ಯ  ಸ್ವಘೋಷಿತ ಮುಖ್ಯಸ್ಥ ಸೋಹನ್‌ ಡಿ. ಶಿರಾನನ್ನು ಭದ್ರತಾ ಪಡೆಗಳು ಶನಿವಾರ ಎನ್‌ಕೌಂಟರ್‌ ನಡೆಸಿ ಹತ್ಯೆಗೈದಿವೆ. ಈಸ್ಟ್‌ ಗಾರೊ ಹಿಲ್ಸ್‌ ಜಿಲ್ಲೆಯ ಡೊಬು ಪ್ರದೇಶದಲ್ಲಿ ಎನ್‌ಕೌಂಟರ್‌ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

Advertisement

ಎನ್‌ಸಿಪಿ ಅಭ್ಯರ್ಥಿ ಜೋನಾಥನ್‌. ಎನ್‌. ಸಂಗ್ಮಾರನ್ನು ಸುಧಾರಿತ ಸ್ಫೋಟಕ ದಾಳಿಯಿಂದ ಹತ್ಯೆ ಮಾಡಿದ ಪ್ರಕರಣದ ಬಳಿಕ ಸೋಹನ್‌ ತಲೆಗೆ 10 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಹತ್ಯೆ ಹಿನ್ನೆಲೆಯಲ್ಲಿ ಬಂಡುಕೋರ ನಿಗ್ರಹ ಕಾರ್ಯಾಚರಣೆಯನ್ನೂ ತೀವ್ರಗೊಳಿಸಲಾಗಿತ್ತು.  ಡೊಬು ಪ್ರದೇಶದ ಅಚಕ್‌ಪೆಕ್‌ ಗ್ರಾಮದಲ್ಲಿ ಕೆಲ ಜಿಎನ್‌ಎಲ್‌ಎ ಬಂಡುಕೋರರು ಇದ್ದಾರೆ ಎಂಬ ಮಾಹಿತಿ ಮೇರೆಗೆ ಬಂಡುಕೋರ ನಿಗ್ರಹ ಪಡೆ ತತ್‌ಕ್ಷಣ ದಾಳಿ ನಡೆಸಿ ಎನ್‌ಕೌಂಟರ್‌ ನಡೆಸಿತು. ಈ ವೇಳೆ ಸೋಹನ್‌ ಮೃತನಾದನು ಎಂದು ಕಾರ್ಯಾಚರಣೆ ನಡೆಸಿದ ತಂಡದಲ್ಲಿದ್ದ ಹಿರಿಯ ಪೊಲೀಸರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next