Advertisement
ಗಣಿಯೊಳಗಿಂದ ನೀರನ್ನು ಹೊರತೆಗೆಯಲು ಅತ್ಯಧಿಕ ಶಕ್ತಿಯ 20 ಪಂಪ್ಗ್ಳನ್ನು ವಾಯುಪಡೆಯ ವಿಮಾನದ ಮೂಲಕ ತರಲಾಗಿದೆ. ಒಡಿಶಾದಿಂದ ಬಂದಿರುವ ಅಗ್ನಿಶಾ ಮಕ ತಂಡವು ನೀರು ತುಂಬಿರುವಂಥ ಕಲ್ಲಿದ್ದಲು ಗಣಿಯಲ್ಲಿ ಇದೇ ಮೊದಲ ಬಾರಿಗೆ ತಮ್ಮ ಕೌಶಲ್ಯ ಪ್ರಯೋಗಿಸಲಿದೆ. ಹಲವು ಹೈಟೆಕ್ ಸಲಕರಣೆಗಳು ಹಾಗೂ ಗ್ಯಾಜೆಟ್ಗಳನ್ನೂ ಬಳಸಲಿದೆ. ಮೊದಲು ಆ ಸ್ಥಳದ ಪರಿಸ್ಥಿತಿಯನ್ನು ಅವಲೋಕಿಸಿ, ನಂತರ ಕಾರ್ಯಾಚರಣೆಗೆ ಯೋಜನೆ ಸಿದ್ಧಪಡಿಸಲಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Related Articles
Advertisement
21: ವಾಯುಪಡೆ ವಿಮಾನ ದಲ್ಲಿ ಸ್ಥಳಕ್ಕೆ ಧಾವಿಸಿರುವ ಒಡಿಶಾ ಅಗ್ನಿಶಾಮಕ ಸಿಬ್ಬಂದಿಯ ಸಂಖ್ಯೆ
150 ವರ್ಷಗಳಿಂದಲೂ ನಡೆಯುತ್ತಿರುವ ಗಣಿಗಾರಿಕೆ.
1,600 ಲೀಟರ್ ಪ್ರತಿಯೊಂದು ಪಂಪ್ ಒಂದು ನಿಮಿಷದಲ್ಲಿ ಹೊರತೆಗೆಯುವ ನೀರಿನ ಪ್ರಮಾಣ
15: ಗಣಿಯೊಳಗೆ ಸಿಲುಕಿಕೊಂಡಿರುವ ಕಾರ್ಮಿಕರು370 ಅಡಿ: ಆಳದಲ್ಲಿ ಸಿಲುಕಿರುವ 15 ಮಂದಿ
20: ಗಣಿಯಲ್ಲಿರುವ ನೀರು ಹೊರ ತೆಗೆಯಲು ಬಳಸಲಾಗುವ ಹೈಪವರ್ ಪಂಪ್ಗ್ಳ ಸಂಖ್ಯೆ
64 ಕೋಟಿ ಟನ್ ಮೇಘಾಲಯ ದಲ್ಲಿರುವ ಗಣಿ ಸಂಪತ್ತು ಹಿಂದಿನ ಘಟನೆಗಳು
2014, ಫೆಬ್ರವರಿ: ಗಾರೋ ಹಿಲ್ಸ್ನಲ್ಲಿ ಅಕ್ರಮ ಗಣಿಯ ಒಂದು ಭಾಗ ಕುಸಿದ ಪರಿಣಾಮ ನಾಲ್ವರು ಕಾರ್ಮಿಕರ ಸಾವು
2013, ಡಿಸೆಂಬರ್: ಜೈಂತಿಯಾ ಹಿಲ್ಸ್ನಲ್ಲಿ ಕಾರ್ಮಿಕರನ್ನು ಗಣಿಯೊಳಕ್ಕೆ ಕೊಂಡೊಯ್ಯುತ್ತಿದ್ದ ಯಂತ್ರದ ಕೇಬಲ್ ತುಂಡಾಗಿ ಐವರು ಕಾರ್ಮಿಕರು ಬಲಿ
2012, ಜುಲೈ: ಗಾರೋ ಹಿಲ್ಸ್ನಲ್ಲಿ ಭೂಮಿಯಡಿಯ ಹಳ್ಳವೊಂದರ ನೀರು ಗಣಿಯಲ್ಲಿ ತುಂಬಿದ ಪರಿಣಾಮ, ನೀರಲ್ಲಿ ಮುಳುಗಿ 15 ಕಾರ್ಮಿಕರು ಸಾವು