Advertisement

ಬೆಂಗಳೂರಿನಲ್ಲಿ ಕಬ್ಬು ಬೆಳೆಗಾರರ ಸಭೆ

12:30 AM Jan 05, 2019 | Team Udayavani |

ನಾಲತವಾಡ: ವಿಜಯಪುರ ಜಿಲ್ಲೆ ಯರಗಲ್‌ ಸಕ್ಕರೆ ಕಾರ್ಖಾನೆ ಸೇರಿದಂತೆ ಉತ್ತರ ಕರ್ನಾಟಕದ ಹಲವು ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ಹಾಗೂ ಗ್ಯಾಂಗ್‌ ಸೂಪರ್ವೈಸರ್‌ಗಳು ಕಬ್ಬು ಬೆಳೆಗಾರರ ಕಟಾವ್‌ ವೇಳೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಇದನ್ನು ಖಂಡಿಸಿ ಬೆಂಗಳೂರಿನಲ್ಲಿ 13ರಂದು ರಾಜ್ಯದ ವಿವಿಧ ಜಿಲ್ಲೆಗಳ ರೈತರ ಸಭೆ ಕರೆದು ಕಾರ್ಖಾನೆಗಳ ವಿರುದಟಛಿ ಹೋರಾಟದ ರೂಪುರೇಷೆ ಸಿದಟಛಿಪಡಿಸಲಾಗುವುದು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಜಿ.ಎ. ಲಕ್ಷ್ಮೀ ನಾರಾಯಣಸ್ವಾಮಿ ತಿಳಿಸಿದ್ದಾರೆ. 

Advertisement

ದೂರವಾಣಿ ಮೂಲಕ ಮಾತನಾಡಿದ ಅವರು, ಕಟಾವ್‌ ಬಂದ ವೇಳೆ ಶ್ರೀಮಂತರ ಕಬ್ಬನ್ನು ಮೊದಲು ಕಟಾವ್‌ ಮಾಡಿ ಕಾರ್ಖಾನೆಗೆ ಕಳುಹಿಸುತ್ತಿದ್ದಾರೆ ಇದು ಸರಿಯಲ್ಲ. ಅಲ್ಪ ಕಬ್ಬು ಬೆಳೆದ ಬಡ ರೈತರ ಕಬ್ಬನ್ನು ಮೊದಲು ಕಟಾವ್‌ ಮಾಡಲು ಕಾರ್ಖಾನೆಯವರು ಆದ್ಯತೆ ನೀಡಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next