Advertisement

ವಿದ್ಯಾರ್ಥಿಗಳಿಂದ ಸ್ಮಾರಕ, ಹುತಾತ್ಮರ ಮನೆಗಳಿಗೆ ಭೇಟಿ

06:35 AM Aug 09, 2017 | Team Udayavani |

ಹೊಸದಿಲ್ಲಿ: 70ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ  ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಹುತಾತ್ಮರು ದೇಶಕ್ಕಾಗಿ ನೀಡಿದ ತ್ಯಾಗ, ಬಲಿದಾನಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಕೇಂದ್ರ ಸರಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ದೇಶದ ಎಲ್ಲ ವಿಶ್ವವಿದ್ಯಾಲಯಗಳು, ಶೈಕ್ಷಣಿಕ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕಗಳು ಮತ್ತು ಹುತಾತ್ಮರ ಮನೆಗಳಿಗೆ ಪ್ರವಾಸ ಕರೆದೊಯ್ಯುವಂತೆ ಕೇಂದ್ರ ಆದೇಶಿಸಿದೆ.

Advertisement

ಇದೇ ವೇಳೆ ಬುಧವಾರ (ಆ.9) “ಕ್ವಿಟ್‌ ಇಂಡಿಯಾ ಚಳವಳಿ’ಗೆ 75 ವರ್ಷ ತುಂಬಲಿದ್ದು, ಬೆಳಗ್ಗೆ 9.30ಕ್ಕೆ ಎಲ್ಲ ವಿವಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿನ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಬೋಧಕೇತರ ಸಿಬಂದಿ, “ನಾವು ಭಯೋತ್ಪಾದನೆ ಮುಕ್ತ, ಜಾತಿ ಮುಕ್ತ, ಭ್ರಷ್ಟಾಚಾರ ಮುಕ್ತ, ಕೊಳಕು ಮುಕ್ತ ಹಾಗೂ ಬಡತನ ಮುಕ್ತ ಭಾರತ ನಿರ್ಮಾಣ ಮಾಡುತ್ತೇವೆ’ ಎಂದು ಪ್ರಮಾಣ ಸ್ವೀಕರಿಸುವಂತೆಯೂ ಕೇಂದ್ರ ಸೂಚಿಸಿದೆ.

“ಸ್ವಾತಂತ್ರ್ಯ ಹೋರಾಟಗಾರರು, ಸೇನೆ, ಅರೆಸೇನೆ ಮತ್ತು ಪೊಲೀಸ್‌ ಪಡೆಗಳ ಹುತಾತ್ಮರ ತ್ಯಾಗ, ಬಲಿದಾನದ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವ  ನಿಟ್ಟಿನಲ್ಲಿ ದೇಶದಲ್ಲಿನ ವಿವಿಧ ಸ್ಮಾರಕಗಳು, ಹುತಾತ್ಮರ ಮನೆ ಮತ್ತಿತರ ಪ್ರದೇಶಗಳಿಗೆ ಮಾಹಿತಿಯುಕ್ತ ಪ್ರವಾಸ ಆಯೋ  ಜಿಸಬೇಕು’ ಎಂದು ಸೂಚಿಸಿ ಯುಜಿಸಿ ಕಾರ್ಯ ದರ್ಶಿ ಜೆ.ಎಸ್‌.ಸಂಧು, ಎಲ್ಲ ವಿಶ್ವ ವಿದ್ಯಾಲಯಗಳ ಕುಲಪತಿಗಳಿಗೆ ಪತ್ರ ಬರೆದಿ ದ್ದಾರೆ. ಹಾಗೇ ಪ್ರಧಾನಿ ಮೋದಿ ಯವರ ಆಶಯದಂತೆ ದೇಶವನ್ನು ಎಲ್ಲ ಸಮಸ್ಯೆಗಳಿಂದ ಮುಕ್ತಗೊಳಿಸಲು ಪ್ರತಿಜ್ಞೆ ಸ್ವೀಕರಿಸು ವಂತೆಯೂ ಅವರು ಪತ್ರದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next