Advertisement

ಸದ್ಯ ಜೀವಿಸುವುದೇ ಪ್ರಧಾನ ಅನಂತರವೇ ದೇವರ ಚಿಂತನೆ : ಮದ್ರಾಸ್‌ ಹೈಕೋರ್ಟ್‌ನ ಮಹತ್ವದ ಅಭಿಮತ

04:10 AM Jul 03, 2021 | Team Udayavani |

ಚೆನ್ನೈ: ಕೊರೊನಾ ಸಂದರ್ಭದಲ್ಲಿ ಜೀವಿ ಸುವುದು ಹೇಗೆ ಎಂಬ ಸ್ಥಿತಿ ನಿರ್ಮಾಣ ವಾಗಿದೆ. ಇಂಥ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸುವ ಅಂಶ ಎರಡನೇ ಆದ್ಯತೆ ಪಡೆ ಯುತ್ತದೆ ಎಂದು ಮದ್ರಾಸ್‌ ಹೈಕೋರ್ಟ್‌ ಶುಕ್ರವಾರ ಹೇಳಿದೆ. ತಮಿಳುನಾಡಿನಲ್ಲಿ ಎಲ್ಲ ಧರ್ಮಕ್ಕೆ ಸೇರಿದ ಪ್ರಾರ್ಥನಾ ಕೇಂದ್ರಗಳನ್ನು ತೆರೆಯಲು ರಾಜ್ಯ ಸರಕಾರಕ್ಕೆ ಅನುಮತಿ ನೀಡಬೇಕು ಎಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಬ್ಯಾನರ್ಜಿ ಮತ್ತು ನ್ಯಾ| ಸೆಂಥಿಲ್‌ ಕುಮಾರ್‌ ರಾಮ ಮೂರ್ತಿ ಅವರ ನ್ನೊಳಗೊಂಡ ನ್ಯಾಯ ಪೀಠ ಈ ಅಭಿ ಪ್ರಾಯ ವ್ಯಕ್ತಪಡಿಸಿದೆ.

Advertisement

“ಸದ್ಯದ ಪರಿಸ್ಥಿತಿ (ಕೊರೊನಾ ಸೋಂಕು) ಯಲ್ಲಿ ಜೀವ ಉಳಿಸಿಕೊಳ್ಳುವುದಕ್ಕೆ ಎಲ್ಲರೂ ಆದ್ಯತೆ ನೀಡುತ್ತಿದ್ದಾರೆ. ಇಂಥ ಸಂದರ್ಭ ದಲ್ಲಿ ಪ್ರಾರ್ಥನೆ ಮತ್ತು ಇತರ ಧಾರ್ಮಿಕ ವಿಚಾರಗಳು 2ನೇ ಆದ್ಯತೆಯಾಗುತ್ತದೆ. ಹೈಕೋರ್ಟ್‌ ಇಂಥ ವಿಚಾರಗಳಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಒಂದು ವೇಳೆ ರಾಜ್ಯ ಸರಕಾರ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಂಡಿಲ್ಲ ಎಂದು ಪರಿಗಣನೆ ಯಾದರೆ ಮಾತ್ರ ನ್ಯಾಯಾಲಯ ಮಧ್ಯಪ್ರವೇಶ ಮಾಡಲು ಸಾಧ್ಯ’ ಎಂದು ಹೇಳಿ, ಅರ್ಜಿಯನ್ನು ತಿರಸ್ಕರಿಸಿತು. ರಾಜ್ಯ ಸರಕಾರ ಪರಿಣತರ ಅಭಿಪ್ರಾಯ ಪಡೆದೇ ಎಲ್ಲ ಕ್ರಮ ಕೈಗೊಂಡಿದೆ ಎಂದು ನ್ಯಾಯ ಪೀಠ ಅರ್ಜಿದಾರರಿಗೆ ಸೂಚಿಸಿತು. 2ನೇ ಅಲೆಯ ಪ್ರಭಾವ ಇನ್ನೂ ಮುಕ್ತಾಯ ವಾಗಿಲ್ಲ. ಜತೆಗೆ 3ನೇ ಅಲೆಯ ಭೀತಿಯೂ ಇದೆ ಎಂದಿದೆ ಹೈಕೋರ್ಟ್‌.

ಗಮನಾರ್ಹ ಅಂಶವೆಂದರೆ ತಮಿಳು ನಾಡು ಸರಕಾರ ಜೂ.28ರಂದೇ ಕೊರೊನಾ ಸೋಂಕು ಪ್ರತಿಬಂಧಕ ನಿಯ  ಮಗಳನ್ನು ಜಾರಿ ಮಾಡುವುದರ ಮೂಲಕ ದೇಗುಲ ಸೇರಿದಂತೆ ಪ್ರಾರ್ಥನ ಸ್ಥಳಗ ಳನ್ನು ತೆರೆಯಲು ಅನುಮತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next