Advertisement

ರಾಮುಲು,ಕರುಣಾಕರ ನಡುವೆ ಸೋಮಶೇಖರ ಸಂಧಾನ 

11:59 AM Mar 01, 2017 | |

ಬಳ್ಳಾರಿ : ಸಂಸದ ಶ್ರೀರಾಮುಲು ಮತ್ತು ಮಾಜಿ ಸಚಿವ ಕರುಣಾಕರ ರೆಡ್ಡಿ ನಡುವೆ ಭೂವಿವಾದ ಕೋರ್ಟ್‌ ಮೆಟ್ಟಿಲೇರಿರುವ ವೇಳೆಯಲ್ಲಿ  ಬಿಜೆಪಿ ಮುಖಂಡ ಸೋಮಶೇಖರ್‌ ರೆಡ್ಡಿ  ಇಬ್ಬರ ನಡುವೆ ಸಂಧಾನಕಾರನಾಗುವುದಾಗಿ ಹೇಳಿಕೊಂಡಿದ್ದಾರೆ. 

Advertisement

ಬುಧವಾರ ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೆಡ್ಡಿ  ‘ಶ್ರೀರಾಮುಲು ಮತ್ತು ಸಹೋದರ ಕರುಣಾಕರ ರೆಡ್ಡಿ ನಡುವೆ ಸಂಧಾನ ನಡೆಸುತ್ತೇನೆ. ಕರುಣಾಕರ ರೆಡ್ಡಿ ನೀಡಿರುವ ದೂರನ್ನು ವಾಪಾಸ್‌ ಪಡೆದುಕೊಳ್ಳುವಂತೆ ಹೇಳುತ್ತೇನೆ. ಆ ಬಳಿಕ ಕರುಣಾಕರಣ ರೆಡ್ಡಿ ವಿರುದ್ಧ ಜಾತಿ ನಿಂದನೆ ಕೇಸ್‌ ಹಾಕಿದವರ ಮನ ಒಲಿಸಿ ಅದನ್ನು ಹಿಂಪಡೆದುಕೊಳ್ಳುವಂತೆ ಮಾಡುತ್ತೇನೆ’ ಎಂದಿರುವುದಾಗಿ ವರದಿಯಾಗಿದೆ.

‘ಶ್ರೀರಾಮುಲು ಅವರು ನಮಗೆ ರಾಜಕೀಯದಲ್ಲಿ ಆಧಾರ ಸ್ತಂಭ ಅವರ ವಿರುದ್ಧ ದೂರು ನೀಡಿದ್ದು ಸರಿಯಲ್ಲ’ ಎಂದು ಹೇಳಿರುವುದಾಗಿ ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next