Advertisement

ಮಾಧ್ಯಮಗಳು ಲಕ್ಷ್ಮಣರೇಖೆ ದಾಟಬಾರದು: ಹೈಕೋರ್ಟ್‌

06:33 AM Mar 16, 2019 | Team Udayavani |

ಬೆಂಗಳೂರು: ಪತ್ರಿಕಾ ಸ್ವಾತಂತ್ರ್ಯ ಇದೆ ಎಂದು ಮಾಧ್ಯಮಗಳು ಲಕ್ಷಣರೇಖೆ ದಾಟಬಾರದು ಮತ್ತು ಚೌಕಟ್ಟು ಮೀರಬಾರದು ಹೈಕೋರ್ಟ್‌ ಹೇಳಿದೆ. ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣವೊಂದರ ಕುರಿತು ಖಾಸಗಿ ಸುದ್ದಿ ವಾಹಿನಿಯೊಂದು ಸುದ್ದಿ ಪ್ರಸಾರ ಮಾಡಿರುವುದನ್ನು ಆಕ್ಷೇಪಿಸಿ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ನ್ಯಾ.ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ರೀತಿ ಅಭಿಪ್ರಾಯಪಟ್ಟಿದೆ.

Advertisement

ಸುದ್ದಿಗಳ ಪ್ರಸಾರ ಮತ್ತು ಪ್ರಕಟಣೆ ವ್ಯಕ್ತಿಗಳ ಖಾಸಗಿತನಕ್ಕೆ ಧಕ್ಕೆ ತರುವಂತೆ ಇರಬಾರದು. ವಿಶೇಷವಾಗಿ ವಾಹಿನಿಗಳು ಹೇಗೆ ಮಿತಿ ದಾಟಬಾರದು ಎಂದು ಸೂಚ್ಯವಾಗಿ ಹೇಳಿದೆ. “ವಿವಾಹ ವಿಚ್ಚೇದನ, ಮಹಿಳೆಯರು ಮತ್ತು ಮಕ್ಕಳ ವಿರುದ್ಧ ದೌರ್ಜನ್ಯ,

-ಅತ್ಯಾಚಾರ ಪ್ರಕರಣಗಳು ಹಾಗೂ ಕೌಟುಂಬಿಕ ವ್ಯಾಜ್ಯಗಳ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರಕ್ಕೆ ಕೆಲವೊಂದು ನಿರ್ಬಂಧಗಳು ಕಾನೂನಿನಲ್ಲಿ ಇವೆ. ಅವುಗಳನ್ನು ಮೀರಿ ಯಾವುದೇ ವ್ಯಕ್ತಿಗಳ ಖಾಸಗಿತನಕ್ಕೆ ಘಾಸಿಯಾಗುವ ಅವರ ಮಾನಹಾನಿಯಾಗುವಂತಹ ವರದಿಗಳನ್ನು ಪ್ರಸಾರ ಮಾಡಬಾರದು ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next