Advertisement

ಮೆಕ್ಕಾ…ಮಕ್ಕೇಶ್ವರ್ ಮಹಾದೇವ ದೇವಸ್ಥಾನವಂತೆ; ಹಿಂದೂ ಮಹಾಸಭಾದ ಕ್ಯಾಲೆಂಡರ್ ನಲ್ಲೇನಿದೆ?

12:30 PM Apr 06, 2022 | Team Udayavani |

ಅಲಿಗಢ್: ಕರ್ನಾಟಕದಲ್ಲಿ ಹಿಜಾಬ್, ಆಜಾನ್ ವಿವಾದ ತಲೆಎತ್ತಿರುವ ನಡುವೆ ಇದೀಗ ಆಲ್ ಇಂಡಿಯಾ ಹಿಂದೂ ಮಹಾಸಭಾ ಕಚೇರಿಯಲ್ಲಿ ಬಿಡುಗಡೆ ಮಾಡಿರುವ ಹಿಂದೂ ಹೊಸ ವರ್ಷದ ಕ್ಯಾಲೆಂಡರ್ ಮತ್ತೊಂದು ಹೊಸ ಚರ್ಚೆಗೆ ಎಡೆ ಮಾಡಿಕೊಟ್ಟಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಹುಬ್ಬಳ್ಳಿ: ಐರಾವತ ಬಸ್ – ಕಾರು ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು, ಐವರಿಗೆ ಗಾಯ

ಹಿಂದೂ ಮಹಾಸಭಾ ಬಿಡುಗಡೆ ಮಾಡಿರುವ ಕ್ಯಾಲೆಂಡರ್ ನಲ್ಲಿ ಮುಸ್ಲಿಮರ ಹಲವಾರು ಧಾರ್ಮಿಕ ಸ್ಥಳವನ್ನು ಹಿಂದೂ ದೇವಾಲಯ ಎಂದು ಉಲ್ಲೇಖಿಸಲಾಗಿದೆ ಎಂದು ವರದಿ ವಿವರಿಸಿದೆ.

ಕ್ಯಾಲೆಂಡರ್ ನಲ್ಲಿ ಉಲ್ಲೇಖವೇನಿದೆ?

ಮುಸ್ಲಿಮರ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಮೆಕ್ಕಾವನ್ನು ಮಕ್ಕೇಶ್ವರ್ ಮಹಾದೇವ್ ದೇವಾಲಯ ಎಂದು ಕ್ಯಾಲೆಂಡರ್ ನಲ್ಲಿ ಉಲ್ಲೇಖಿಸಲಾಗಿದೆ. ಮಥುರಾದ ದ ರಾಯಲ್ ಈದ್ಗಾವನ್ನು ಶ್ರೀಕೃಷ್ಣ ಜನ್ಮಭೂಮಿ ಎಂದು ಹೆಸರಿಸಲಾಗಿದೆ. ತಾಜ್ ಮಹಲ್ ಅನ್ನು ತೇಜೊ ಮಹಾಲಯ ಶಿವ ದೇವಸ್ಥಾನ, ಮಧ್ಯಪ್ರದೇಶದ ಕಮಲ್ ಮೌಲಾ ಮಸೀದಿಯನ್ನು ಭೋಜ್ ಶಾಲಾ ಎಂದು ಕರೆಯಲಾಗಿದೆ. ಕಾಶಿಯ ಜ್ಞಾನವಾಪಿ ಮಸೀದಿಯನ್ನು ವಿಶ್ವನಾಥ ದೇವಾಲಯ ಎಂಬುದಾಗಿ, ಕುತುಬ್ ಮಿನಾರ್ ಅನ್ನು ವಿಷ್ಣು ಸ್ತಂಭ, ಜೌನ್ ಪುರದ ಅಟ್ಲಾ ಮಸೀದಿಯನ್ನು ಅಟ್ಲಾ ದೇವಿ ದೇವಾಲಯ ಎಂದು ಉಲ್ಲೇಖಿಸಿರುವುದಾಗಿ ವರದಿ ತಿಳಿಸಿದೆ.

Advertisement

ಕ್ಯಾಲೆಂಡರ್ ನಲ್ಲಿ ವಿವರಣೆಯೂ ಇದೆ:

ಮೆಕ್ಕಾ ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಹಿಂದೂ ಕ್ಯಾಲೆಂಡರ್ ನಲ್ಲಿ ಮೆಕ್ಕಾವನ್ನು ಮಕ್ಕೇಶ್ವರ ಮಹಾದೇವ ದೇವಸ್ಥಾನ ಎಂದು ಕರೆಯಲಾಗಿದ್ದು, ಇದರ ಜೊತೆಗೆ ವಿವರಣೆ ನೀಡಲಾಗಿದೆ. ಒಂದು ಕಾಲದಲ್ಲಿ ಇಲ್ಲಿ ಶಿವನ ದೇವಸ್ಥಾನ ಇದ್ದಿದ್ದು, ಈಗಲೂ ಕೂಡಾ ಛಿದ್ರವಾದ ಸ್ಥಿತಿಯಲ್ಲಿರುವ ಶಿವಲಿಂಗ ಇದ್ದಿರುವುದಾಗಿ ಮುದ್ರಿಸಲಾಗಿದೆ.

ಮಂಗಳವಾರ ಅಲಿಗಢ್ ಜಿಲ್ಲೆಯಲ್ಲಿರುವ ಅಖಿಲ ಭಾರತ ಹಿಂದೂ ಮಹಾಸಭಾ ಕಚೇರಿಯಲ್ಲಿ ಹಿಂದೂ ಹೊಸ ವರ್ಷ ಮತ್ತು ನವದುರ್ಗೆಯ ಕುರಿತು ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಈ ಸಂದರ್ಭದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಡಾ.ಪೂಜಾ ಶಾಕುನ್ ಪಾಂಡೆ ಹಿಂದೂ ನ್ಯೂ ಇಯರ್ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಿದ್ದರು.

2018ರಲ್ಲಿ ಅಖಿಲ ಭಾರತ್ ಹಿಂದೂ ಮಹಾಸಭಾ ಬಿಡುಗಡೆ ಮಾಡಿರುವ ಕ್ಯಾಲೆಂಡರ್ ನಲ್ಲಿರುವ ಮಾಹಿತಿಯನ್ನು ಸಂಗ್ರಹಿಸಿ ಈ ಕ್ಯಾಲೆಂಡರ್ ನಲ್ಲಿ ಮುದ್ರಿಸಲಾಗಿದೆ ಎಂದು ಪಾಂಡೆ ಹೇಳಿದರು. 2018ರ ಕ್ಯಾಲೆಂಡರ್ ನಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಶೀಘ್ರವಾಗಿ ನಿರ್ಮಾಣ ಮಾಡಬೇಕೆಂದು ಉಲ್ಲೇಖಿಸಿತ್ತು. ಆದರೆ ಈಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದ್ದು, ಇದೀಗ ಈ ಸ್ಥಳಗಳ ಹಿಂದೂ ಹೆಸರನ್ನು ಮುದ್ರಿಸುವ ಮೂಲಕ ಆ ಹೆಸರನ್ನು ಇಡುವಂತೆ ಒತ್ತಾಯಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿದೇಶಿ ದಾಳಿಕೋರರು ದೇಶದಲ್ಲಿರುವ ಹಿಂದೂಗಳ ಪವಿತ್ರ ಸ್ಥಳಗಳನ್ನು ಲೂಟಿ ಮಾಡಿದ್ದರು. ಅಲ್ಲದೇ ಧಾರ್ಮಿಕ ಕ್ಷೇತ್ರಗಳ ಹೆಸರನ್ನು ಬದಲಾಯಿಸಿ ಮಸೀದಿಯನ್ನಾಗಿ ಪರಿವರ್ತಿಸಲಾಗಿದೆ. ಈಗ ಹಿಂದೂಗಳ ಸ್ಥಳಗಳು ನಮಗೆ ವಾಪಸ್ ಸೇರಬೇಕಾಗಿದೆ ಎಂದು ಪಾಂಡೆ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next