Advertisement
ಪತ್ರಿಕಾ ಹೇಳಿಕೆ ನೀಡಿದ ಅವರು, ಬಸವಣ್ಣನವರು ವೀರಶೈವ ಅನ್ನುವ ಪದವನ್ನು ಒಪ್ಪಿ ತಮ್ಮ ವಚನಗಳಲ್ಲಿ ಬಳಕೆ ಮಾಡಿಕೊಂಡಿದ್ದಾರೆ. ಅದರಂತೆ 40 ವಚನಕಾರರು 143 ವಚನಗಳಲ್ಲಿ ವೀರಶೈವ ಪದ ಬಳಸಿದ್ದಾರೆ. ಅದರಂತೆ ಲಿಂಗಾಯತ ಎನ್ನುವ ಪದ 13 ವಚನಗಳಲ್ಲಿ ಬಳಸಿದ್ದಾರೆ.ಲಿಂಗಾಯತ ಶಬ್ದದ ಅರ್ಥ, ಲಿಂಗವನ್ನು ಯಾರು ಶರೀರದ ಮೇಲೆ ಧರಿಸುತ್ತಾರೆ ಅವರು ಮಾತ್ರ ಲಿಂಗವಂತ ಎಂದು ಒಪ್ಪಿಕೊಳ್ಳಲು ಸಾಧ್ಯ. ಲಿಂಗ ಧರಿಸದೇ ಲಿಂಗಾಯತ ಧರ್ಮದ ಬಗ್ಗೆ ಮಾತನಾಡುವ ಹಕ್ಕು ಅವರಿಗಿಲ್ಲ ಎಂದಿದ್ದಾರೆ. ಎಂ.ಬಿ. ಪಾಟೀಲರು ಯಾವುದೋ ಒತ್ತಡಕ್ಕೆ ಸಿಕ್ಕು ಈ ನಿರ್ಣಯಕ್ಕೆ ಬಂದಿದ್ದಾರೆ. ಯಾರೋ ಹೇಳುವ ಸಿದ್ಧಾಂತಕ್ಕೆ ಒಪ್ಪಿಗೆ ಸೂಚಿಸುವುದು ತಪ್ಪು. ಹಳಕಟ್ಟಿಯವರು ಸಂಪಾದಿಸಿದ ವಚನ ಗ್ರಂಥಗಳನ್ನು ಅಧ್ಯಯನ ಮಾಡಲಿ, ಅವರು ಅನುಸರಿಸುವ ಧರ್ಮಗುರುಗಳು, ವಿದ್ವಾಂಸರು ಬರೆದಿರುವ ಮತ್ತು ಮುದ್ರಿಸಿರುವ ಹಾಗೂ ಮಠಗಳಿಂದ
ಪ್ರಕಟವಾಗಿರುವ ಗ್ರಂಥಗಳನ್ನು ಅವಲೋಕಿಸಲಿ. ಆಗ ಸತ್ಯಾಂಶ ಮನವರಿಕೆಯಾಗುತ್ತದೆ ಎಂದು ಕಿವಿಮಾತು ಹೇಳಿದ್ದಾರೆ.
ಒಡೆಯುವ ಕೆಲಸಕ್ಕೆ ಉಪಯೋಗ ಮಾಡಿಕೊಂಡಿದ್ದಾರೆ ಎಂದು ದೂರಿದ್ದಾರೆ.