Advertisement

ಗೆಹ್ಲೋಟ್ ಗೆ ಪಾಠ ಕಲಿಸಲು ಇದು ಸಕಾಲ: ರಾಜಸ್ಥಾನ ಕಾಂಗ್ರೆಸ್ ವಿರುದ್ಧ ಮಾಯಾವತಿ ಆಕ್ರೋಶ

05:56 PM Jul 28, 2020 | keerthan |

ಜೈಪುರ: ರಾಜಸ್ಥಾನದ ರಾಜಕೀಯ ಪರಿಸ್ಥಿತಿ ದಿನಕ್ಕೊಂದು ತಿರುವು ಪಡೆಯುತ್ತಿದೆ. ಚುನಾವಣೆ ಫಲಿತಾಂಶದ ಬೆನ್ನಲ್ಲೇ ಬಿಎಸ್ ಪಿಯ ಎಲ್ಲಾ ಆರು ಶಾಸಕರನ್ನು ಕಾಂಗ್ರೆಸ್ ಜೊತೆ ವಿಲೀನ ಮಾಡಿದ್ದ ಸಿಎಂ ಅಶೋಕ್ ಗೆಹ್ಲೋಟ್ ಗೆ ಪಾಠ ಕಲಿಸಲು ಇದು ಸಕಾಲವಾಗಿದೆ. ಹೀಗಾಗಿ ಗೆಹ್ಲೋಟ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದೇನೆ ಎಂದು ಬಿಎಸ್ ಪಿ ನಾಯಕಿ ಮಾಯಾವತಿ ಹೇಳಿದ್ದಾರೆ.

Advertisement

ರಾಜಸ್ಥಾನ ಸರ್ಕಾರದ ವಿರುದ್ದ ಮಾಜಿ ಡಿಸಿಎಂ ಸಚಿನ್ ಪೈಲಟ್ ಬಣ ಸಿಡಿದ ಕಾರಣ ಸರ್ಕಾರ ಉಳಿಸಿಕೊಳ್ಳುವ ಅಗತ್ಯ ಸಿಎಂ ಗೆಹ್ಲೋಟ್ ಗೆ ಎದುರಾಗಿದೆ. ವಿಶ್ವಾಸಮತ ಯಾಚನೆಗೆ ರಾಜ್ಯಪಾಲ ಕಲ್ರಾಜ್ ಮಿಶ್ರಾ ಜುಲೈ 31ರಂದು ಅವಕಾಶ ನೀಡಿದ್ದಾರೆ. ವಿಶ್ವಾಸಮತ ಸಾಬೀತು ಮಾಡುವ ವಿಶ್ವಾಸದಲ್ಲಿದ್ದ ಅಶೋಕ್ ಗೆಹ್ಲೋಟ್ ಗೆ ಈಗ ಮಾಯಾವತಿ ನಡೆ ಹಿನ್ನಡೆಯಾಗಿದೆ.

ಮಾಯಾವತಿ ಈಗಾಗಲೇ ರಾಜಸ್ಥಾನದ ತನ್ನ ಶಾಸಕರಿಗೆ ಕಾಂಗ್ರೆಸ್ ಸರಕಾರದ ವಿರುದ್ಧ ಮತ ಚಲಾಯಿಸುವಂತೆ ವಿಪ್ ನೀಡಿದ್ದಾರೆ. 200 ಸದಸ್ಯರ ರಾಜಸ್ಥಾನ ವಿಧಾನಸಭೆಯಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಉಳಿಸಿ ಕೊಳ್ಳಬೇಕಾದರೆ ಅವರಿಗೆ 101 ಸ್ಥಾನದ ಅಗತ್ಯವಿದೆ. ಆದರೆ, ಬಂಡಾಯ ಶಾಸಕರ ಹೊರತಾಗಿಯೂ ಪ್ರಸ್ತುತ ಅವರು 102 ಸ್ಥಾನವನ್ನು ಹೊಂದಿದ್ದಾರೆ. ಆದರೆ, ಒಂದು ವೇಳೆ ಬಿಎಸ್‌ಪಿ ಶಾಸಕರ ಮತಗಳು ಅನರ್ಹವಾದರೆ ಸರ್ಕಾರ ಬಹುಮತವನ್ನು ಕಳೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next