Advertisement

ಸುಪ್ರೀಂ ಕೋರ್ಟ್‌ ಬಾಯ್ದೆರೆ ಮಾತನ್ನು ವಿಕೃತಗೊಳಿಸಬೇಡಿ: ಮಾಯಾವತಿ

10:15 AM Feb 09, 2019 | udayavani editorial |

ಲಕ್ನೋ : ‘ಮಾಯಾವತಿ ತನ್ನ ಪ್ರತಿಮೆಯನ್ನು ಸ್ಥಾಪಿಸಲು ಖರ್ಚು ಮಾಡಿದ ಸಾರ್ವಜನಿಕರ ಹಣವನ್ನು ಸರಕಾರದ ಖಜಾನೆಗೆ ಮರುಪಾವತಿಸ ಬೇಕಾಗುವುದೆಂದು’ ಸುಪ್ರೀಂ ಕೋರ್ಟ್‌ ಪ್ರಕರಣದ ವಿಚಾರಣೆ ವೇಳೆ ಹೇಳಿರುವ ಬಾಯ್ದೆರೆಯ ಮಾತುಗಳನ್ನು ಮಾಧ್ಯಮದವರಾಗಲೀ ಬಿಜೆಪಿ ನಾಯಕರಾಗಲೀ ವಿಕೃತಗೊಳಿಸಬಾರದೆಂದು ಬಿಎಸ್‌ಪಿ ಪರಮೋಚ್ಚ ನಾಯಕಿ ಮಾಯಾವತಿ ಹೇಳಿದ್ದಾರೆ. 

Advertisement

‘ಪ್ರಕರಣದ ಅಂತಿಮ ವಿಚಾರಣೆ ಎ.2ರಂದು ನಡೆಯಲಿದ್ದು ಆ ಬಳಿಕವೇ ತೀರ್ಪು ಬರಬೇಕಿದೆ. ಆದುದರಿಂದ ಮಾಧ್ಯದವರಲ್ಲಿ ಮತ್ತು ಬಿಜೆಪಿ ನಾಯಕರಲ್ಲಿ ನನ್ನ ವಿನಮೃ ಕೋರಿಕೆ ಎಂದರೆ ಅವರು ಸುಪ್ರೀಂ ಕೋರ್ಟಿನ ಬಾಯ್ದೆರೆ ಅಭಿಪ್ರಾಯವನ್ನು ವಿಕೃತಗೊಳಿಸಬಾರದು; ಅಂತೆಯೇ ಅವರು ಗಾಳೀಪಟ ಹಾರಿಸುವುದನ್ನು ನಿಲ್ಲಿಸಬೇಕು’ ಎಂದು ಮಾಯಾವತಿ ಟ್ವೀಟ್‌ ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next