Advertisement

ಮೊದಲು ನಿಮ್ಮ ಮನೆ ಸರಿ ಮಾಡಿಕೊಳ್ಳಿ : ರಾಹುಲ್‌ ಗಾಂಧಿಗೆ ಟಾಂಗ್‌ ಕೊಟ್ಟ ಮಾಯಾವತಿ

11:52 PM Apr 10, 2022 | Team Udayavani |

ಲಕ್ನೋ: ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರಿಗೇ ಮುಖ್ಯಮಂತ್ರಿಯಾಗುವ ಆಫ‌ರ್‌ ಕೊಟ್ಟು, ಮೈತ್ರಿಗೆ ಆಹ್ವಾನಿಸಿದ್ದೆವು ಎಂದು ಹೇಳಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಮಾಯಾವತಿ ಟಾಂಗ್‌ ಕೊಟ್ಟಿದ್ದಾರೆ.

Advertisement

“ಮೊದಲು ನಿಮ್ಮ ಮನೆಯನ್ನು ಸರಿ ಮಾಡಿಕೊಳ್ಳಿ, ಆಮೇಲೆ ನನ್ನ ಸುದ್ದಿಗೆ ಬನ್ನಿ’ ಎಂದು ಅವರು ಖಡಕ್‌ ಆಗಿ ನುಡಿದಿದ್ದಾರೆ.

“ತಮ್ಮ ಚದುರಿದ ಮನೆಯನ್ನೇ ಸರಿ ಮಾಡಿಕೊಳ್ಳಲು ಆಗದ ರಾಹುಲ್‌, ನಮ್ಮ ಪಕ್ಷಕ್ಕೆ ಬೆರಳು ಮಾಡಿ ತೋರಿಸುತ್ತಿದ್ದಾರೆ. ಇದು ನಮ್ಮ ಬಗ್ಗೆ ಅವರ ದ್ವೇಷವನ್ನು ತೋರಿಸುತ್ತದೆ. ನಮ್ಮ ಪಕ್ಷದ ಬಗ್ಗೆ ಚಿಂತಿಸುವ ಬದಲು ನಿಮ್ಮ ಪಕ್ಷದ ಬಗ್ಗೆ ಚಿಂತಿಸಿ ಕೊಳ್ಳಿ’ ಎಂದಿದ್ದಾರೆ ಮಾಯಾವತಿ. ಹಾಗೆಯೇ ಬಿಜೆಪಿಯು “ಕಾಂಗ್ರೆಸ್‌ ಮುಕ್ತ ಭಾರತ’ ಮಾಡಲು ಯತ್ನಿಸುತ್ತಿಲ್ಲ. ಬದಲಾಗಿ ವಿಪಕ್ಷ ಮುಕ್ತ ಭಾರತವನ್ನಾಗಿ ಮಾಡಲು ಯತ್ನಿಸುತ್ತಿದೆ ಎಂದಿದ್ದಾರೆ.

ಮಾಯಾವತಿ ಅವರ ಹೇಳಿಕೆಗೆ ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ಕೊಟ್ಟಿದ್ದು, “ಕಾಂಗ್ರೆಸ್‌ ಸಂಸತ್ತಿನ ಒಳಗೆ ಮತ್ತೆ ಹೊರಗೆ ಜನರಿಗಾಗಿಯೇ ದುಡಿದಿದೆ. ನಮ್ಮ ಪಕ್ಷದ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next