Advertisement

ಇಂದಿನಿಂದ ಉದಯ ಟಿವಿಯಲ್ಲಿ ಮಾಯಾ

11:22 AM Jul 09, 2018 | |

ಈಗಂತೂ ಕಿರುತೆರೆ ವೀಕ್ಷಕರಿಗಾಗಿ ಹೊಸ ಹೊಸ ಧಾರಾವಾಹಿ, ಕಾರ್ಯಕ್ರಮಗಳು ಆರಂಭವಾಗುತ್ತಲೇ ಇರುತ್ತವೆ. ಈ ಮೂಲಕ ಪ್ರೇಕ್ಷಕರ ಆಯ್ಕೆ ಸ್ವತಂತ್ರ ಹೆಚ್ಚಾಗಿದೆ. ಈಗ ಕಿರುತೆರೆಯಲ್ಲಿ ಮತ್ತೂಂದು ಹೊಸ ಧಾರಾವಾಹಿ ಆರಂಭವಾಗುತ್ತಿದೆ. ಅದು “ಮಾಯಾ’.

Advertisement

“ಮಾಯಾ’ ಎಂಬ ಹೊಸ ಧಾರಾವಾಹಿ ಉದಯ ವಾಹಿನಿಯಲ್ಲಿ ಇಂದಿನಿಂದ (ಜುಲೈ 09) ರಾತ್ರಿ 7.30ಕ್ಕೆ ಕ್ಕೆ ಪ್ರಸಾರವಾಗಲಿದೆ. ಅವ್ನಿಟೆಲಿ ಮೀಡಿಯ ಈ ಮಾಯಾ ಧಾರಾವಾಹಿಯನ್ನು ತಯಾರಿಸುತ್ತಿದ್ದಾರೆ.ನಂದಾಸ್‌ ಮತ್ತು ನಾರಾಯಣ ಮೂರ್ತಿ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

ದೇಹ ನಾಶವಾದರೂ ಆತ್ಮಕ್ಕೆ ನಾಶವಿಲ್ಲ ಎಂಬ ಆಧ್ಯಾತ್ಮದ ಸಾರವನ್ನು ಆಧರಿಸಿ ಈ ಧಾರಾವಾಹಿ ಮೂಡಿಬರುತ್ತಿದೆ.ಸಾವಿರಾರು ವರ್ಷಗಳ ಹಿಂದೆ ಕಣ್ಮೆರೆಯಾದ ಆತ್ಮವನ್ನು ಮತ್ತೆ ಈ ಕಾಲದಲ್ಲಿ ತನ್ನ ಹಿಡಿತಕ್ಕೆ ತೆಗೆದುಕೊಂಡು ಇಡೀ ಪ್ರಪಂಚದಲ್ಲಿ ತನ್ನ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಬೇಕೆನ್ನುವುದು ಕಾಲಾಂತಕನ ಆಸೆ.

ಅವನ ಆಸೆ ನೆರವೇರದೆದುಷ್ಟ ಶಕ್ತಿಗಳನ್ನು ತಡೆಯಬೇಕೆಂಬ ಇನ್ನೊಂದು ಗುಂಪು. ಕಾಲಾಂತಕನಿಗೆ ಬೆಂಬಲವಾಗಿ ನಿಲ್ಲುವ ರಣಮಾಯಾ … ಈ ಅಂಶದೊಂದಿಗೆ “ಮಾಯಾ’ ಕಥೆ ಸಾಗಲಿದೆ. ಇಂದಿನ ಜನ್ಮದಲ್ಲಿಅರವಿಂದ್‌, ಯಕ್ಷ ಮತ್ತು ದರ್ಶಿನಿ ಯಾಗಿ ಹುಟ್ಟಿರುವ ಮೂರು ಜನರೇ ಈ ಕಥೆಯ ಕೇಂದ್ರ ಬಿಂದುಗಳು. 

ತಾರಾಗಣದಲ್ಲಿ ಶ್ವೇತ ನಾಯಕಿಯಾಗಿ, ಆಕಾಂಕ್ಷ ಮತ್ತೂರ್ವ ನಾಯಕಿಯಾಗಿ,ಅಜಯ್‌ ಈ ಧಾರಾವಾಹಿಯ ನಾಯಕನಾಗಿ ಅಭಿನಯಿಸತ್ತಿದ್ದಾರೆ. ಹಿರಿಯ ನಟಉಮೇಶ್‌, ಮೋಹನ್‌ ಶರ್ಮ, ಅಶೋಕ್‌ ಮುಂತಾದವರು ನಟಿಸುತ್ತಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next