Advertisement

ಭಾರತ್‌ ಐಕ್ಯತಾ ಯಾತ್ರೆ ಯಶಸ್ವಿಯಾಗಲಿ

05:53 PM Sep 12, 2022 | Team Udayavani |

ಹರಪನಹಳ್ಳಿ: ರಾಷ್ಟ್ರೀಯ ಕಾಂಗ್ರೆಸ್‌ ಯುವ ನಾಯಕ ರಾಹುಲ್‌ ಗಾಂಧಿ ಅವರ ಸಾರಥ್ಯದಲ್ಲಿ ಕೈಗೊಂಡಿರುವ ಭಾರತ್‌ ಐಕ್ಯತಾ ಯಾತ್ರೆ ಅಭಿಯಾನ ಯಶಸ್ವಿಯಾಗಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ್‌ ಶುಭ ಹಾರೈಸಿದರು.

Advertisement

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿರುವ ಗಾಂಧಿ  ಮೆಮೋರಿಯಲ್‌ ಹಾಲ್‌ಗೆ ತೆರಳಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ನಂತರ ಮಾತನಾಡಿದ ಅವರು, ಭಾರತ್‌ ಜೋಡೋ ಯಾತ್ರೆಯು ಕನ್ಯಾಕುಮಾ ರಿಯಿಂದ ಕಾಶ್ಮೀರದವರೆಗೆ 150 ದಿನಗಳ 3570 ಕಿ.ಮೀ ವರೆಗೂ ನಡೆಯಲಿದ್ದು, ಪಾದಯಾತ್ರೆ ಉದ್ದಕ್ಕೂ ರಾಹುಲ್‌ ಗಾಂಧಿಯವರು ಅಲ್ಲಿನ ಜನರ ಸ್ಥಿತಿ-ಗತಿ ಅವರ ಜೀವನ ಶೈಲಿ ಆಲಿಸಲಿದ್ದಾರೆ ಎಂದರು. ಸದ್ಭಾವನಾ ಯಾತ್ರೆಯು
ರಾಜ್ಯಕ್ಕೆ ಕೇರಳದ ವಯ್ನಾಡಿನಿಂದ ಗುಂಡ್ಲುಪೇಟೆ ಮೂಲಕ ಅಕ್ಟೋಬರ್‌ನಲ್ಲಿ ತಲುಪಲಿದೆ. ಬಳ್ಳಾರಿ-ವಿಜಯನಗರದ ಮಾರ್ಗವಾಗಿ ಕೂಡ್ಲಿಗಿ ಮೂಲಕ ಹಾದು ಹೋಗಲಿರುವ ಈ ಯಾತ್ರೆಗೆ ನಾವು ಕೂಡ ಸಾಥ್‌ ನೀಡುತ್ತವೆ. ಭಾರತ್‌ ಐಕ್ಯತಾ ಯಾತ್ರೆಗೆ ಯಾವುದೇ ಅಡಚಣೆ ಆಗದಂತೆ ಯಶಸ್ವಿಯಾಗಿ ನಡೆಯಲಿ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಎಂ.ವಿ. ಅಂಜಿನಪ್ಪ ಮಾತನಾಡಿ, ಬ್ರಿಟಿಷರನ್ನು ದೇಶದಿಂದ ಹೊಡೆದೊಡಿಸಿದ ರೀತಿಯಲ್ಲೆಯೇ ಬಿಜೆಪಿಯನ್ನು ಅ ಧಿಕಾರದಿಂದ ಹೊಡಿಸಬೇಕಾಗಿದೆ. ಬಿಜೆಪಿ ಸರ್ಕಾರದ ವಿರುದ್ಧ ಜನ ಬೇಸತ್ತಿದ್ದಾರೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ. ದೇಶದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ.ಇವೆಲ್ಲವನ್ನೂ ಜನರಿಗೆ ತಿಳಿಸಬೇಕಾದ ಅಗತ್ಯವಿದೆ.

ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಯವರು ಭಾರತ ಐಕ್ಯತಾ ಯಾತ್ರೆ ಕೈಗೊಂಡಿದ್ದು ಇದು ಯಶಸ್ವಿಯಾಗಲಿದೆ ಎಂದರು. ಇದೇ ವೇಳೆ ಕಾರ್ಯಕರ್ತರು ಮೇಣದ ಬತ್ತಿ ಬೆಳಗಿಸುವ ಮೂಲಕ ಭಾರತ್‌ ಜೋಡೋ ಯಾತ್ರೆಗೆ ಬೆಂಬಲ ವ್ಯಕ್ತಪಡಿಸಿದರು. ಪುರಸಭೆ ಸದಸ್ಯರಾದ ವೆಂಕಟೇಶ್‌ ವಕೀಲರು, ಚಿಕ್ಕೇರಿ ಬಸಪ್ಪ, ಮುಖಂಡರಾದ ಹುಲಿಕಟ್ಟಿ ಚಂದ್ರಪ್ಪ, ಉದಯ್‌ಶಂಕರ್‌, ಮತ್ತೂರು ಬಸವರಾಜ, ಸಾಸ್ವಿಹಳ್ಳಿ ನಾಗರಾಜ, ಬಾಲಾಜಿ ಶಿವರಾಜ್‌, ರಮೇಶ್‌, ನರೇಶ್‌, ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮಿ ಚಂದ್ರಶೇಖರ್‌, ಸಹನಾ, ವನಜಾಕ್ಷಮ್ಮ, ರತ್ನಮ್ಮ, ರೇಣುಕಮ್ಮ, ಹಾಲಮ್ಮ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next