Advertisement

ಕೆಂಪು ದೀಪ ತೆಗೆಸದ ಕೋಲ್ಕತಾ ಇಮಾಮ್‌ ಬರ್ಕಾತಿ ವಿರುದ್ಧ ಕೇಸು

05:26 PM May 12, 2017 | Team Udayavani |

ಕೋಲ್ಕತಾ : ಕೇಂದ್ರ ಸರಕಾರದ ಸೂಚನೆಗೆ ಡೋಂಟ್‌ ಕೇರ್‌ ಎನ್ನುವ ರೀತಿಯಲ್ಲಿ ತಮ್ಮ ಕಾರಿನ ಮೇಲೆ ಕೆಂಪು ದೀಪವನ್ನು ತೆಗೆಸಲು ನಿರಾಕರಿಸಿರುವ ಇಲ್ಲಿನ ಟಿಪ್ಪು ಸುಲ್ತಾನ್‌ ಮಸೀದಿಯ ಶಾಹಿ ಇಮಾಮ್‌ ಮೌಲಾನಾ ನೂರುರ್‌ ರೆಹಮಾನ್‌ ಬರ್ಕಾತಿ ವಿರುದ್ಧ ಇಂದು ಶುಕ್ರವಾರ ಕೇಸು ದಾಖಲಾಗಿದೆ.

Advertisement

ಕೇಂದ್ರ ಸರಕಾರದ ಸೂಚನೆಯ ಪ್ರಕಾರ ತಮ್ಮ ಕಾರಿನ ಕೆಂಪು ದೀಪವನ್ನು ತೆಗೆಸಲು ನಿರಾಕರಿಸಿದ್ದಲ್ಲದೇ ಅಸಂಬದ್ಧ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಇಮಾಮ್‌ ವಿರುದ್ಧ ಬಿಜೆಪಿ ನಾಯಕರೊಬ್ಬರು ಟೋಪ್‌ಸಿಯಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. 

ವಾಹನಗಳ ಮೇಲಿನ ಕೆಂಪು ದೀಪ ತೆಗೆಸುವಂತೆ ಕೇಂದ್ರ ಸರಕಾರ ನೀಡಿದ್ದ ಆದೇಶವನ್ನು ಧಿಕ್ಕರಿಸಿದ್ದ ಇಮಾಮ್‌, ಕೇಂದ್ರ ಸರಕಾರ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿದಲ್ಲಿ ದೇಶದಲ್ಲಿನ ಮುಸ್ಲಿಮರು ಜಿಹಾದ್‌ ನಡೆಸಲಿದ್ದಾರೆ ಎಂಬ ಬೆದರಿಕೆಯನ್ನು ಹಾಕಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next