Advertisement

ಮಟ್ಟು : ರಸ್ತೆ ಕಾಮಗಾರಿಗೆ ಅಳವಡಿಸಲಾದ  ಕ್ರಶರ್‌ ಧೂಳಿಗೆ ಮುಕ್ತಿ  

01:00 AM Feb 07, 2019 | Team Udayavani |

ಕಟಪಾಡಿ: ಮಟ್ಟು ಕಡಲ ಕಿನಾರೆಯ ಬಳಿಯ ರಸ್ತೆ ದುರಸ್ತಿ ಕಾಮಗಾರಿಗೆ ಅಳವಡಿಸಿದ್ದ ಕ್ರಶರ್‌ನಿಂದಾಗಿ ನಿವಾಸಿಗಳು ನಿತ್ಯ ಧೂಳು ತಿನ್ನುವ ಪರಿಸ್ಥಿತಿ ಇದೀಗ ತಪ್ಪಿದೆ. 

Advertisement

ಧೂಳಿನ ಸಮಸ್ಯೆ ಬಗ್ಗೆ ಉದಯವಾಣಿ ವರದಿ ಮಾಡಿದ್ದು, ಈ ಹಿನ್ನೆಲೆ  ಅಧಿಕಾರಿಗಳು ಸೂಚನೆ ನೀಡಿದ್ದು, ಗುತ್ತಿಗೆದಾರರು ತ್ವರಿತವಾಗಿ ಕಾಮಗಾರಿ ಮುಗಿಸಿದ್ದಾರೆ.  

ಸಮಸ್ಯೆ ನಿವಾರಣೆಯಾದ ಹಿನ್ನೆಲೆ ಯಲ್ಲಿ ಸ್ಥಳೀಯರು ಅಧಿಕಾರಿಗಳು ಮತ್ತು ಗುತ್ತಿಗೆ ದಾರರನ್ನು ಶ್ಲಾ ಸಿದ್ದಾರೆ.  

75 ಲಕ್ಷ ರೂ. ಕಾಮಗಾರಿ
ಮಟ್ಟು ಬೀಚ್‌ ಬಳಿಯಲ್ಲಿ ಮಳೆಹಾನಿ ದುರಸ್ತಿ ಯೋಜನೆಯಡಿ 60 ಲಕ್ಷ ರೂ. ಮತ್ತು ಸಿ.ಎಂ.ಜಿ.ಆರ್‌. ನಿಧಿಯಡಿ 15 ಲಕ್ಷ ರೂ.ಬಳಸಿಕೊಂಡು 3.75 ಮೀ. ಅಗಲದ ಸುಮಾರು 1.50 ಕಿ.ಮೀ ಭಾಗದಲ್ಲಿ ಕಾಮಗಾರಿಯನ್ನು ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next