Advertisement
ಮಂಗಳೂರು ಸೆಂಟ್ರಲ್ನಿಂದ ಮುಂಬಯಿಗೆ ಸಂಚರಿಸುವ ಮತ್ಸ್ಯ ಗಂಧ ಎಕ್ಸ್ಪ್ರಸ್ ಸಂಚಾರವನ್ನು ಕೊರೊನಾ ಹಿನ್ನೆಲೆಯಲ್ಲಿ ಮಾ. 22ರಿಂದ ಸ್ಥಗಿತಗೊಳಿಸಲಾಗಿದೆ. ಸಂಚಾರ ಸ್ಥಗಿತಗೊಂಡು ಸರಿಸುಮಾರು 9 ತಿಂಗಳಾಗಿವೆ. ಕೊರೊನಾ ಸೋಂಕು ಇಳಿಮುಖವಾಗಿ ಪರಿಸ್ಥಿತಿಯಲ್ಲಿ ಸುಧಾರಣೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆ ದೇಶದ ವಿವಿಧ ಭಾಗಗಳಿಗೆ ವಿಶೇಷ ನೆಲೆಯಲ್ಲಿ ಈಗಾಗಲೇ ಹಿಂದೆ ಚಾಲನೆಯಲ್ಲಿದ್ದ ರೈಲುಗಳ ಸಂಚಾರಕ್ಕೆ ಅನುಮತಿ ನೀಡಿದೆ.
ಪ್ರಸ್ತುತ ಕೊರೊನಾ ಲಾಕ್ಡೌನ್ ಬಹುತೇಕ ಸಡಿಲಗೊಂಡಿದ್ದು ಆರ್ಥಿಕತೆ ತೆರೆದುಕೊಳ್ಳುತ್ತಿದೆ. ಮಂಗಳೂರು-ಮುಂಬಯಿ ಮಧ್ಯೆ ಜನ ಸಂಚಾರ ಹೆಚ್ಚುತ್ತಿದ್ದು, ವಾಣಿಜ್ಯ ವ್ಯವಹಾರಗಳು ಸುಧಾರಣೆಯಾಗುತ್ತಿವೆ. ವಿಮಾನ, ಬಸ್ಗಳ ಸಂಚಾರವೂ ಆರಂಭಗೊಂಡಿವೆ. ಹಾಗಿರುವಾಗ ಈ ರೈಲಿನ ಆರಂಭಕ್ಕೆ ಯಾಕೆ ತಡ ಎಂದು ಪ್ರಶ್ನಿಸುವಂತಾಗಿದೆ. ಪ್ರಸ್ತುತ ಮುಂಬಯಿಗೆ ನೇರವಾಗಿ ಹೋಗಲು ತಿರುವನಂತಪುರದಿಂದ ಮಂಗಳೂರು ಜಂಕ್ಷನ್ ಮೂಲಕ ಹಾದು ಹೋಗುವ ನೇತ್ರಾವತಿ ಎಕ್ಸ್ಪ್ರೆಸ್ ರೈಲು ಮಾತ್ರ ಆಸರೆಯಾಗಿದೆ. ಮತ್ಸ್ಯಗಂಧ ಪ್ರಾರಂಭಗೊಂಡರೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಜನರಿಗೆ ಗೋವಾ, ಮುಂಬಯಿ ಸಂಚಾರ ಮಾತ್ರವಲ್ಲದೆ ಕುಮಟಾ, ಅಂಕೋಲಾ ಮುಂತಾದ ಕಡೆಗಳಿಗೂ ಸಂಚಾರಕ್ಕೆ ಅನುಕೂಲವಾಗಲಿದೆ.
Related Articles
– ಅನಿಲ್ ಹೆಗ್ಡೆ, ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿಕರ ಅಭಿವೃದ್ಧಿ ಸಂಘದ ತಾಂತ್ರಿಕ ಸಲಹೆಗಾರ
Advertisement