Advertisement

BJP; ಮಥುರಾದಿಂದ 3ನೇ ಬಾರಿ:ಕೃಷ್ಣ ನಗರಿಯಲ್ಲಿ ದೊಡ್ಡ ಕೆಲಸ ಮಾಡಬೇಕಿದೆ ಎಂದ ಹೇಮಾ ಮಾಲಿನಿ

10:07 AM Mar 03, 2024 | Team Udayavani |

ಮುಂಬೈ: ಅಭ್ಯರ್ಥಿ ಬದಲಾಗುತ್ತಾರೆ ಎನ್ನುವ ಚರ್ಚೆಯ ನಡುವೆ ಪ್ರಖ್ಯಾತ ನಟಿ, ಸಂಸದೆ ಹೇಮಾ ಮಾಲಿನಿ ಅವರು ಉತ್ತರ ಪ್ರದೇಶದ ಮಥುರಾದಿಂದ ಮೂರನೇ ಬಾರಿ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಹೇಮಾ ಮಾಲಿನಿ “ನಾನು ಇಲ್ಲಿ ಬಹಳಷ್ಟು ಕೆಲಸಗಳನ್ನು ಮಾಡಲು ಬಯಸಿದ್ದೆ, ಮೊದಲ ಐದು ವರ್ಷಗಳಲ್ಲಿ ನಾನು ಅನೇಕ ಕೆಲಸಗಳನ್ನು ಮಾಡಿದ್ದೇನೆ. ಅದು ನನ್ನ ಎರಡನೇ ಅವಧಿಗಿಂತ ಇನ್ನೂ ಉತ್ತಮವಾಗಿತ್ತು” ಎಂದರು.

”ಮೂರನೇ ಬಾರಿ ಸ್ಪರ್ಧಿಸುತ್ತಿದ್ದು ಕೃಷ್ಣ ನ ನಗರಿಯಲ್ಲಿ ಈಗ ದೊಡ್ಡ ಕೆಲಸವನ್ನು ಮಾಡಬೇಕಾಗಿದೆ. ಪ್ರಧಾನಿ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಅಮಿತ್ ಶಾ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ” ಎಂದರು.

75 ರ ಹರೆಯದ ಹೇಮಾ ಮಾಲಿನಿ ಅವರಿಗೆ ಟಿಕೆಟ್ ಕೈತಪ್ಪುವ ಕುರಿತು ಲೆಕ್ಕಾಚಾರ ಮಾಡಲಾಗಿತ್ತು. ಆದರೆ ಬಿಜೆಪಿ ನಾಯಕತ್ವವು ಮತ್ತೆ ಟಿಕೆಟ್ ನೀಡಿ ಲೆಕ್ಕಾಚಾರ ತಲೆ ಕೆಳಗೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next