Advertisement

Match Fixing; ಮಹಾದೇವ ಆ್ಯಪ್‌ ಬಳಸಿ ಕ್ರಿಕೆಟ್‌ ಫಿಕ್ಸಿಂಗ್‌?

11:59 PM Nov 12, 2023 | Team Udayavani |

ರಾಯಪುರ: ಮಹಾದೇವ ಬೆಟ್ಟಿಂಗ್‌ ಆ್ಯಪ್‌ನ ಹಗರಣ ಸುತ್ತಿಬಳಸಿ ಕ್ರಿಕೆಟ್‌ ಬುಡಕ್ಕೆ ಬಂದಿದೆ. ಈ ಆ್ಯಪ್‌ ಬಳಸಿ ಬೆಟ್ಟಿಂಗ್‌, ಮ್ಯಾಚ್‌ಫಿಕ್ಸಿಂಗ್‌ ಕೂಡ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಮಹಾರಾಷ್ಟ್ರದಲ್ಲಿ ಪೊಲೀಸರು ಎಫ್ಐಆರ್‌ ಕೂಡ ದಾಖಲಿಸಿದ್ದಾರೆ.

Advertisement

ಈಗಾಗಲೇ ಪ್ರಕರಣದಲ್ಲಿ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಹೆಸರು ಕೇಳಿಬಂದಿದೆ. ಅವರಿಗೆ 500 ಕೋಟಿ ರೂ. ಸಂದಾಯವಾಗಿದೆ ಎನ್ನಲಾಗಿದೆ. ಈ ಬಗ್ಗೆ ಇನ್ನೂ ತನಿಖೆಯಾಗಬೇಕು. ಮಹಾದೇವ ಹಗರಣದಲ್ಲಿ ಮುಖ್ಯ ಆರೋಪಿಗಳಾಗಿರುವ ಸೌರಭ್‌ ಚಂದ್ರಕರ್‌, ರವಿ ಉಪ್ಪಳ ವಿರುದ್ಧ ಛತ್ತೀಸ್‌ಗಢದಲ್ಲಿ ತನಿಖೆ ನಡೆಯುತ್ತಿದೆ. ಇಬ್ಬರೂ ತಾವು ಕ್ರಿಕೆಟ್‌ ಫಿಕ್ಸಿಂಗ್‌ನಲ್ಲಿ ತೊಡಗಿಲ್ಲ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next