Advertisement

ಮಾತಾ ಮಾಣಿಕೇಶ್ವರಿ ದರ್ಶನಕ್ಕೆ ಜನಸಾಗರ

06:50 AM Nov 10, 2018 | Team Udayavani |

ಗುರುಮಠಕಲ್‌: ಯಾನಾಗುಂದಿ ಮಾಣಿಕ್ಯಗಿರಿ ಆಶ್ರಮದ ಮಾತಾ ಮಾಣಿಕೇಶ್ವರಿ ಅವರ ಧರ್ಮ ಸಂದೇಶ ಯಾತ್ರೆ ಪಟ್ಟಣದ ಮಾರ್ಗವಾಗಿ ತೆಲಂಗಾಣ ರಾಜ್ಯದ ಪೆದ್ದ ಶಹಾಪೂರ ಆನಂದಾಶ್ರಮಕ್ಕೆ ತೆರಳಿತು.

Advertisement

ಈ ವೇಳೆ ಮಾತಾ ಮಾಣಿಕೇಶ್ವರಿ ದರ್ಶನಕ್ಕಾಗಿ ಪಟ್ಟಣದ ಐಬಿ, ಬಸವೇಶ್ವರ ವೃತ್ತ, ಕಾಕಲವಾರ ಕ್ರಾಸ್‌, ಚಪೆಟ್ಲಾ ಕ್ರಾಸ್‌,ಬಸ್‌ ಡೀಪೊವರೆಗೂ ಭಕ್ತರು ಕಾಯ್ದು ನಿಂತಿದ್ದರು. ಮಾತಾ ಮಾಣಿಕೇಶ್ವರಿ ಪಟ್ಟಣ ಪ್ರವೇಶಿಸಿ ಮುಚ್ಚಿದ ಕಾರಿನಲ್ಲಿ ಬೂದೂರು ಗೇಟ್‌, ಬೋರಬಂಡಾ, ಧರ್ಮಾಪೂರ, ಗುಂಜನೂರು ಕ್ರಾಸ್‌ ಮೂಲಕ ತೆಲಂಗಾಣ ಪ್ರವೇಶ ಮಾಡಿದರು.

ಯಾತ್ರೆ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ದರ್ಶನಕ್ಕಾಗಿ ನೂಕು ನುಗ್ಗಲು ಉಂಟಾಯಿತು. ಪೊಲೀಸ್‌ ಸಿಬ್ಬಂದಿ ಕೂಡಲೇ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಶಾಸಕ ನಾಗನಗೌಡ ಕಂದಕೂರ ತಮ್ಮ ಕುಟುಂಬ ಸದಸ್ಯರೊಡನೆ ಅಮ್ಮನವರ ದರ್ಶನ ಪಡೆದರು. ಖಾಸಾ ಮಠದ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀಗಳು ಹಾಗೂ ನೆರಡಗುಂಬಾ ಶ್ರೀಗಳು ಯಾತ್ರೆಗೆ ಶುಭ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next