Advertisement

ಎನ್‌ಜಿಒಗಳ ವಿರುದ್ಧ ಸಾಮೂಹಿಕ ಚಳವಳಿ ನಡೆಯಲಿ: ಗೋಯಲ್‌

10:00 AM Oct 22, 2019 | sudhir |

ಪಣಜಿ: ಭಾರತದ ಬಡಜನರ ಅಭಿವೃದ್ಧಿಗೆ ತೊಡಕಾಗಿರುವಂಥ ಎನ್‌ಜಿಒ (ಸರ್ಕಾರೇತರ ಸಂಸ್ಥೆಗಳು)ಗಳ ವಿರುದ್ಧ ಸಾಮೂಹಿಕ ಚಳವಳಿ ನಡೆಸಬೇಕು ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಕರೆ ನೀಡಿದ್ದಾರೆ.

Advertisement

ಪಣಜಿಯಲ್ಲಿ ನಡೆದ “ವೈಬ್ರೆಂಟ್‌ ಗೋವಾ’ ಹೂಡಿಕೆ ಶೃಂಗದಲ್ಲಿ ಭಾನುವಾರ ಮಾತನಾಡಿದ ಅವರು, ಅಭಿವೃದ್ಧಿ ಯೋಜನೆಗಳ ವಿರುದ್ಧ ಪ್ರತಿಭಟನೆ ನಡೆಸುವಂಥ ಎನ್‌ಜಿಒಗಳು ದೇಶದ ಬಡ ಜನರ ಅಭಿವೃದ್ಧಿಗೆ ಅತ್ಯಂತ ಕೆಟ್ಟ ರೀತಿಯಲ್ಲಿ ಅಡ್ಡಿಯಾಗುತ್ತಿವೆ. ಅಭಿವೃದ್ಧಿ ಯೋಜನೆ ಗಳಿಗೆ ತೊಂದರೆ ಮಾಡುವುದನ್ನು ನಿಲ್ಲಿಸಿ ಎಂದು ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ.

ಪ್ರಗತಿ ಬಯಸದ ಎನ್‌ಜಿಒಗಳು ಇಂಥ ಕೃತ್ಯವೆಸಗುತ್ತಿದ್ದು, ಅವುಗಳ ವಿರುದ್ಧ ದೊಡ್ಡ ಜನಾಂದೋಲನ ನಡೆಯಬೇಕು ಎಂದಿದ್ದಾರೆ. ಉತ್ತರ ಗೋವಾದ ಮೋಪಾದಲ್ಲಿ ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣ ವಿರೋಧಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಾ ಗೋಯಲ್‌ ಈ ಮಾತುಗಳನ್ನು ಹೇಳಿದ್ದಾರೆ. ಗೋವಾದಲ್ಲಿ ಅಭಿವೃದ್ಧಿಯಾಗ ಬಾರದು, ಒಳ್ಳೆಯ ರಸ್ತೆ , ಏರ್‌ಪೋರ್ಟ್‌, ಹೋಟೆಲ್‌ ಬರಬಾರದು ಎಂಬ ದುರು ದ್ದೇಶದಿಂದ ಕೆಲವರು ಈ ರೀತಿಯ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next