Advertisement

ಮಸೀದಿ ಅಧ್ಯಕ್ಷ ಅಯುಬ್‌ ಹತ್ಯೆ: ಮಸೀದಿ ಅಧ್ಯಕ್ಷ ಸ್ಥಾನ, ಆಸ್ತಿ ವಿಚಾರಕ್ಕೆ ಕೃತ್ಯ

11:36 AM Jul 15, 2022 | Team Udayavani |

ಬೆಂಗಳೂರು: ಸಹೋದರನ ಪುತ್ರನಿಂದಲೇ ಚಾಕು ಇರಿತಕ್ಕೊಳಗಾದ ಮಾಜಿ ಕಾರ್ಪೋರೇಟರ್‌ ಪತಿ ಅಯೂಬ್‌ ಖಾನ್‌ ಚಿಕಿತ್ಸೆ ಫ‌ಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ.

Advertisement

ಈ ಸಂಬಂಧ ಅಯುಬ್‌ ಖಾನ್‌ ಸಹೋದರ(ಅಣ್ಣ) ಪ್ಯಾರುಖಾನ್‌ ಪುತ್ರ ಮತ್ತಿನ್‌ ಖಾನ್‌ (25) ಎಂಬಾತನನ್ನು ಬಂಧಿಸಲಾಗಿದೆ.

ಅಯುಬ್‌ ಖಾನ್‌ ಪತ್ನಿ ನಾಜಿಮಾ ಖಾನಂ ಈ ಹಿಂದೆ ಬಿಬಿಎಂಪಿ ಸದಸ್ಯರಾಗಿದ್ದರು. ಜತೆಗೆ ಅಯುಬ್‌ ಖಾನ್‌ ಟಿಪ್ಪು ನಗರದ ಖುದಾದತ್‌ ಮಸೀದಿಗೆ 15 ವರ್ಷಗಳಿಂದ ಅಧ್ಯಕ್ಷರಾಗಿದ್ದು, ಮುಂದಿನ ವರ್ಷ ಅವರ ಪುತ್ರ ಸಿದ್ದಿಕ್‌ ಖಾನ್‌ನನ್ನು ಮುಖ್ಯಸ್ಥನನ್ನಾಗಿ ಮಾಡಲು ಸಿದ್ಧತೆ ನಡೆಸಿದ್ದರು. ಈ ವಿಚಾರ ತಿಳಿದ ಮತ್ತಿನ್‌ ಖಾನ್‌, 6 ತಿಂಗಳ ಹಿಂದೆ ತನ್ನನ್ನು ಮಸೀದಿ ಮುಖ್ಯಸ್ಥನನ್ನಾಗಿ ಮಾಡುವಂತೆ ಚಾಕು ಹಿಡಿದು ಗಲಾಟೆ ಮಾಡಿದ್ದ. ಆದರೆ, ಯಾವುದೇ ದೂರು ನೀಡಿರಲಿಲ್ಲ. ಈ ಮಧ್ಯೆ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಆರೋಪಿ ಮನೆ ಬಳಿ ಬಂದು ಗಲಾಟೆ ತೆಗೆದು ಅಯುಬ್‌ ಖಾನ್‌ನ ಹೊಟ್ಟೆಗೆ ಇರಿದಿದ್ದಾನೆ. ಈ ಸಂಬಂಧ ಗಂಭೀರವಾಗಿ ಗಾಯಗೊಂಡಿದ್ದ ಅಯುಬ್‌ ಖಾನ್‌ನನ್ನು ಆಸ್ಪ ತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ.

ಇದನ್ನೂ ಓದಿ:ಚಾಲಕನ ಬಳಿ ಹಣವಿಲ್ಲವೆಂದು ವಾಹನ ಸುಟ್ಟು ಹಾಕಿ ವಿಕೃತಿ ಮೆರದ ಪುಂಡರು

ಆರೋಪಿ ಮತ್ತಿನ್‌ ಖಾನ್‌ ನನ್ನು ಬಂಧಿಸಲಾಗಿದೆ. ಪ್ರಾಥಮಿಕ ವಿಚಾರಣೆಯಲ್ಲಿ ಮಸೀದಿ ಅಧ್ಯಕ್ಷ ಸ್ಥಾನ ಮತ್ತು ಆಸ್ತಿ ವಿಚಾರಕ್ಕೆ ಕೃತ್ಯ ನಡೆದಿದೆ ಎಂದು ಪೊಲೀಸರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next