Advertisement

ಬಾಂಗ್ಲಾದೇಶದ ಅಧ್ಯಕ್ಷರ ಸಾರೋಟಿಗೆ ಮಾರ್ವಾರಿ ಕುದುರೆ

07:07 PM Nov 13, 2022 | Team Udayavani |

ಜೋಧ್‌ಪುರ: ಬಾಂಗ್ಲಾದೇಶದ ಅಧ್ಯಕ್ಷರ ಸಾರೋಟನ್ನು ಎಳೆಯುವ ನಿಟ್ಟಿನಲ್ಲಿ ಆರು ಮಾರ್ವಾರಿ ಕುದುರೆಗಳನ್ನು ರಫ್ತು ಮಾಡಲಾಗಿದೆ.

Advertisement

ಇದೇ ಮೊದಲ ಬಾರಿಗೆ ದೇಶೀಯ ತಳಿಯನ್ನು ಮತ್ತೊಂದು ದೇಶಕ್ಕೆ ರಫ್ತು ಮಾಡಲಾಗಿದೆ ಎಂದು ಅಖಿಲ ಭಾರತ ಮಾರ್ವಾರಿ ಕುದುರೆ ಸೊಸೈಟಿಯ ಅಧ್ಯಕ್ಷ ಜಂಗ್‌ಜೀತ್‌ ಸಿಂಗ್‌ ನತ್ವಾತ್‌ ತಿಳಿಸಿದ್ದಾರೆ.

ಸೆ.29ರಂದೇ ಆರು ಕುದುರೆಗಳನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. ಜೋಧ್‌ಪುರದ ಉಮೈದ್‌ ಭವಾನ್‌ ಅರಮನೆಗೆ ಸೇರಿದ ಕುದುರೆಗಳಾಗಿವೆ.

ವಿದೇಶ ವ್ಯಾಪಾರ ಮಹಾನಿರ್ದೇಶನಾಲಯದ ನಿರ್ದೇಶಕರು ಅವುಗಳನ್ನು ರಫ್ತು ಮಾಡುವ ಬಗ್ಗೆ ಅನುಮೋದನೆಯನ್ನೂ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next