Advertisement

ಉಗ್ರರ ಗುಂಡೇಟಿಗೆ ಯೋಧ ಹುತಾತ್ಮ

08:27 AM May 13, 2018 | Harsha Rao |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಸಿಆರ್‌ಪಿಎಫ್ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

Advertisement

ಪುಲ್ವಾಮಾದ ಮೊಹಲ್ಲಾ ಟಾಕಿಯ ಚಿನಾರ್‌ ಬಾಗ್‌ನ ಮನೆಯೊಂದರಲ್ಲಿ ಉಗ್ರರು ಅಡಗಿರುವ ಮಾಹಿತಿ ಮೇರೆಗೆ ಭದ್ರತಾ ಪಡೆ ಶೋಧ ಕಾರ್ಯ ಆರಂಭಿಸಿತ್ತು. ಈ ವೇಳೆ ಉಗ್ರರು ಏಕಾಏಕಿ ಗುಂಡು ಹಾರಿಸಿದ್ದು, ಮನೆಯ ಮಾಲಕ ಬಶೀರ್‌ ಅಹಮದ್‌ ತೀವ್ರವಾಗಿ ಗಾಯಗೊಂಡಿದ್ದಾರೆ. ಅಲ್ಲದೆ, ಮುಂದುವರಿದ ಚಕಮಕಿಯಲ್ಲಿ ಗಾಯ ಗೊಂಡಿದ್ದ ಯೋಧ ಮನ್‌ದೀಪ್‌ ಕುಮಾರ್‌  ಕೂಡ ಅನಂತರ ಕೊನೆಯುಸಿರೆಳೆದಿದ್ದಾರೆ. ಕತ್ತಲಿನಲ್ಲಿ ಉಗ್ರರು ಪರಾರಿಯಾಗಿದ್ದು, ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಏತನ್ಮಧ್ಯೆ, ರಜೌರಿಯಲ್ಲಿ ಹವಾಲಾ ವಹಿವಾಟಿನಲ್ಲಿ ನಿರತವಾಗಿದ್ದ ಹಿಜ್ಬುಲ್‌ ಮುಜಾಹಿದೀನ್‌ನ ಘಟಕವೊಂದನ್ನು ಭದ್ರತಾ ಪಡೆ ಪತ್ತೆಹಚ್ಚಿದ್ದು, ನಾಲ್ವರನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next