Advertisement

ಲಕ್ಷಾಂತರ ರೂ.ಮೌಲ್ಯದ ಗಾಂಜಾ ವಶ: ಅಬಕಾರಿ ಅಧಿಕಾರಿಗಳಿಂದ ಓರ್ವನ ಬಂಧನ

07:58 PM Sep 03, 2021 | Team Udayavani |

ವಿಜಯಪುರ: ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಓರ್ವ ಆರೋಪಿಯನ್ನು ಜಿಲ್ಲೆಯ ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಅಮೋಘ ಸಿದ್ದ ಯಮನಪ್ಪ ಲೋಗಾಂವಿ ಬಂಧಿತ ಆರೋಪಿ. ಈತನಿಂದ ಲಕ್ಷಾಂತರ ರೂ. ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದಾರೆ.

Advertisement

ಶುಕ್ರವಾರ ಬೆಳಗಾವಿ ಅಬಕಾರಿ ಅಪರಾಧ ವಿಭಾಗದ ಅಪರ ಆಯುಕ್ತ ಡಾ.ವೈ ಮಂಜುನಾಥ ಹಾಗೂ ವಿಜಯಪುರ ಉಪ ಆಯುಕ್ತೆ ಸೈಯೀದ ಅಜ್ಮತ್ ಆಪ್ರೀನ್  ಮಾರ್ಗದರ್ಶನದಲ್ಲಿ ಖಚಿತ ಮಾಹಿತಿ ಆಧರಿಸಿ ಉಪ ಅಧೀಕ್ಷಕ ಎಚ್.ಎಸ್. ವಜ್ಜರಮಟ್ಟಿ ಹಾಗೂ ಅಬಕಾರಿ ನಿರೀಕ್ಷಕರು ಜಿಲ್ಲಾ ವಿಚಕ್ಷಣ ಧಳದ ನಿರೀಕ್ಷಕ ಮಹಾದೇವ ಪೂಜಾರಿ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.

ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ರತ್ನಾಪೂರ ಕ್ರಾಸ್ ನಲ್ಲಿ ಆರೋಪಿ ಅಮೋಘ ಸಿದ್ದ ಯಮನಪ್ಪ ಲೋಗಾಂವಿ ತನ್ನ ದ್ವೀಚಕ್ರ ವಾಹನದಲ್ಲಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ  ಗಾಂಜಾ ಸಾಗಿಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಆರೋಪಿ ಬಳಿ 1.10 ಲಕ್ಷ ರೂ. ಮೌಲ್ಯದ 4 ಕೆಜಿ ಒಣಗಿದ ಗಾಂಜಾ ಪತ್ತೆಯಾಗಿದ್ದು, ವಶಕ್ಕೆ ಪಡೆದಿದ್ದಾರೆ.

ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಿಜಯಪುರ ಅಬಕಾರಿ ಪಿಎಸ್ಐ ಪ್ರಕಾಶ ಜಾಧವ, ಪೇದೆಗಳಾದ ಆಶ್ರೀತ್, ಈರಗೊಂಡ ಹಟ್ಟಿ, ಭೀಮಣ್ಣ ಕುಂಬಾರ ಹಾಗೂ ವಾಹನ ಚಾಲಕ ಪರಶುರಾಮ ತೆಲಗಿ ದಾಳಿಯಲ್ಲಿ ಪಾಲ್ಹೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next