Advertisement

Kundapura: ಗಾಂಜಾ ಸೇವನೆ: ಇಬ್ಬರು ವಶಕ್ಕೆ

06:52 PM Aug 12, 2024 | Team Udayavani |

ಕುಂದಾಪುರ: ಹೊಸಾಡು ಗ್ರಾಮದ ಕುಂಬಾರಮಕ್ಕಿ ಎಂಬಲ್ಲಿ ಗಾಂಜಾ ಸೇವಿಸುತ್ತಿದ್ದ ಇಬ್ಬರನ್ನು ಅಬಕಾರಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

ಜಿ. ಎಸ್‌. ಅಭಿಷೇಕ್‌ ಮತ್ತು ರಂಜಿತ್‌ ಆಚಾರ್ಯ ಅವರನ್ನು ಕುಂದಾಪುರ ಉಪವಿಭಾಗದ ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು ಗಾಂಜಾ ಸೇವಿಸಿರುವುದನ್ನು ಶ್ರೀ ಮಾತಾ ಆಸ್ಪತ್ರೆ ಕುಂದಾಪುರದ ವೈದ್ಯರು ದೃಢಪಡಿಸಿದ್ದಾರೆ. ಅದಕ್ಕೂ ಮುನ್ನ  ಕೋಟೇಶ್ವರದಲ್ಲಿ ಗಣೇಶ ಎಂಬಾತನನ್ನು, ಗಂಗೊಳ್ಳಿಯಲ್ಲಿ ಸಚಿನ್‌ ಎಂಬಾತನನ್ನು ಗಾಂಜಾ ಸೇವಿಸುತ್ತಿರುವಾಗ ವಶಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಅವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next