Advertisement

ಮಾರಣಕಟ್ಟೆ: ನೂತನ ಪ್ರಸಾದ ಸೇವಾ ಕೌಂಟರ್‌ ಉದ್ಘಾಟನೆ

01:30 AM Jan 17, 2019 | Harsha Rao |

ಕೊಲ್ಲೂರು: ಮಾರಣಕಟ್ಟೆಯ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯ ಉತ್ಸವದ ವಿಶೇಷ ಮುಹೂರ್ತದಲ್ಲಿ ದೇವಸ್ಥಾನದ ಉತ್ತರ ದಿಕ್ಕಿನಲ್ಲಿ ನೂತನವಾಗಿ ನಿರ್ಮಿಸಲಾದ ಪ್ರಸಾದ ಸೇವಾ ಕೌಂಟರ್‌ನ ಉದ್ಘಾಟನೆ ಜರಗಿತು.

Advertisement

ದೇಗುಲದ ಆನುವಂಶಿಕ ಆಡಳಿತ ಮೊಕ್ತೇಸರ ಸಿ. ಸದಾಶಿವ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಗುಲದ ಯಕ್ಷೆ ಪಾತ್ರಿ ಶ್ರೀಧರ ಮರ್ಡಿ ನೂತನ ಪ್ರಸಾದ ಸೇವಾ ಕೌಂಟರ್‌ನ್ನು ಉದ್ಘಾಟಿಸಿದರು.

ಈ ಸಂದರ್ಭ ಚಿಕ್ಕು ದರ್ಶನ ಪಾತ್ರಿ ಗಳು, ಕೃಷ್ಣಮೂರ್ತಿ ಮಂಜ, ಮಾಜಿ ಧರ್ಮದರ್ಶಿ ಸಿ. ಮಂಜಯ್ಯ ಶೆಟ್ಟಿ, ಗುಡುಕೇರಿ ಮನೆಯವರಾದ ಸಿ. ಸುರೇಂದ್ರ ಶೆಟ್ಟಿ, ಶಂಕರ ಶೆಟ್ಟಿ, ಜಯಂತ ಶೆಟ್ಟಿ, ದಿನಕರ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಅಶೋಕ ಶೆಟ್ಟಿ, ಗೋವರ್ಧನ ಶೆಟ್ಟಿ, ಸರ್ವೋತ್ತಮ ಶೆಟ್ಟಿ, ಭಾಸ್ಕರ ಶೆಟ್ಟಿ, ನಿವೃತ್ತ ಅಧ್ಯಾಪಕ ಕೆ. ಶಂಕರ ಶೆಟ್ಟಿ, ಮಂಜಯ್ಯ ಶೆಟ್ಟಿ, ಜಯಪ್ರಕಾಶ ಶೆಟ್ಟಿ, ಆದರ್ಶ ಶೆಟ್ಟಿ, ಅಕೌಂಟಂಟ್‌ ನಾರಾಯಣ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷ ಸಂತೋಷ ಮಡಿವಾಳ, ಅರ್ಚಕರು ಹಾಗೂ ದೇಗುಲದ ಸಿಬಂದಿ ಉಪಸ್ಥಿತರಿದ್ದರು. ಅರ್ಚಕ ಶಂಕರ ಮಂಜ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಸಿ. ರಘುರಾಮ ಶೆಟ್ಟಿ ಗುಡಿಕೇರಿ ಮನೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next